Posts

Showing posts from October, 2016

ನಮ್ಮೊಳಗೆ ಇರಬೇಕಾದ "ಅಪ್ಪ ಮಕ್ಕಳು"

*ನಮ್ಮೊಳಗೆ ಇರಬೇಕಾದ "ಅಪ್ಪ ಮಕ್ಕಳು"*       ಕೆಲವೊಂದು ಕುಟುಂಬ ಮದುವೆಯ ನಂತರ ಬೇರ್ಪಡುವುದುಂಟು. ಇನ್ನೂ ಕೆಲವರು ಒಟ್ಟಿಗೇನೇ ತಂದೆ ತಾಯಿಯೊಂದಿಗೆ ಹೆಂಡತಿ ಹಾಗೂ ಮಕ್ಕಳು ಜೊತೆಗೇ ಇರುತ್ತಾರೆ. ತಂದೆ ತಾಯಿಯ ಜೊತೆಗೆ ಬೆಳೆಯುವ ಕೆಲವೊಂದು ಮಕ್ಕಳು ತಂದೆಯ ಪ್ರೀತಿಯಿಂದ ವಂಚಿತರಾಗುತಿದ್ದಾರೆ. ಕೆಲಸದ ಒತ್ತಡ, ಹಣಕ್ಕಾಗಿ ಕೆಲಸದ ಅನಿವಾರ್ಯತೆ, ಮನೆಯಲ್ಲಿ ಕೂರದೆ ಗೆಳೆಯ ಮನೆಯಲ್ಲಿ ನೆಮ್ಮದಿ ಈ ರೀತಿಯಾಗಿ ಕಾರಣ ಹೇಳಿ ಮನೆಯಿಂದ ಕಾಲ್ಕಿತ್ತವರು ಮಕ್ಕಳನ್ನು ಬಂಧಿಯಾಗಿಸುತ್ತಿದ್ದಾರೆ. ಇದು ಸಮಾಜಿಕವಾಗಿಯೂ, ಧಾರ್ಮಿಕವಾಗಿಯೂ ತಪ್ಪು. ಇದನ್ನು ತಿದ್ದಿ ಕೊಳ್ಳುವ ಅನಿವಾರ್ಯತೆ ನಮ್ಮೆಡೆಯಲ್ಲಿದೆ.      ದಿನಂಪ್ರತೀ ಬೆಳಿಗ್ಗೆ ಸೂರ್ಯೋದಯದ ಮೊದಲು ತನ್ನ ದಿನಚರಿ ವಸ್ತುಗಳೊಂದಿಗೆ ಮನೆ ಬಿಟ್ಟು ದೂರದ ಆಫೀಸಿಗೋ ಅಥವಾ ಹೊಲಕ್ಕೆ ಕೆಲಸಕ್ಕೆಂದು ಹೊರಟ ಅಪ್ಪ ನಂತರ ಸಾಯಂಕಾಲ ಆರು ಘಂಟೆಗೆ ಬಳಲಿದ ದೇಹದೊಂದಿಗೆ ಮನೆಯ ಕಡೆ ಬರುತ್ತಾನೆ. ಮಧ್ಯಾಹ್ನ ಸಾಬಾನ ಕೈಯಿಂದ ಖರೀದಿಸಿದ ಮೀನಿನ ಜೊತೆಗೆ ಗಂಜಿ ಚಟ್ನಿಯನ್ನೂ ಸೇವಿಸಿ ಸ್ವಲ್ಪ ಹೊತ್ತು ಮೊಬೈಲಲ್ಲೋ ಅಥವಾ ದಿನ ಪತ್ರಿಕೆ ಓದಿಯೋ ಕಾಲ ಕಳೆದು ಮಲಗುತ್ತಾನೆ...  ಮರುದಿನ ಅದೇ ಅಪ್ಪ, ಅದೇ ರೀತಿ..       ಒಂದು ರೀತಿಯಾಗಿ ಹೇಳಬೇಕಾದರೆ, ದೂರದ ದುಬಾಯಿ ಅಥವಾ ಸೌದಿಯಲ್ಲಿರುವ ಉದ್ಯೋಗಿ ತನ್ನ ವರ್ಷದ ಅವಧಿಯ ತಿಂಗಳ ರಜೆಯಲ್ಲಿ ಬಂದು ಮ...

ಖಲೀಫರ ಚರಿತ್ರೆ

*ಶ್ರೀಮಂತರೂ, ಖಲೀಫರೂ, ಶಹೀದರೂ*  *ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ*  *ಕಿರು ಪರಿಚಯ*           ಇಸ್ಲಾಂ ಧರ್ಮದ ಚರಿತ್ರೆಯ ಇತಿಹಾಸದ ಮೂರನೇ ಖಲೀಫರಾದ ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ ರವರು ಕ್ರಿ.ಶ 576 ರಲ್ಲಿ ಸೌದಿ ಅರೇಬಿಯಾದ ತಾಯಿಫ್ ಎಂಬ ಪ್ರದೇಶದಲ್ಲಿ ತಂದೆ ಅಫ್ಫಾನ್ ಇಬ್ನ್ ಅಲ್ ಅಸ್ ಹಾಗೂ ತಾಯಿ ಅರ್ವಾ ಬಿಂತ್ ಕುರಯ್ಯ ಇವರ ಮಗನಾಗಿ ಜನಿಸಿದರು. ಇಸ್ಲಾಂ ಇತಿಹಾಸದಲ್ಲಿ ಕಿ.ಶ 644 ರ ನವೆಂಬರ್ ತಿಂಗಳಿನಿಂದ ಕಿ.ಶ 656 ರ ಜೂನ್ ತಿಂಗಳ ವರೆಗೆ ಖಲೀಫರಾಗಿ ಅಧಿಕಾರ ನಿರ್ವಹಿಸಿದರು.   ತನ್ನ ಜೀವನದ 79ನೇ ವರ್ಷದಲ್ಲಿ ಕಿ.ಶ 656 ಜೂನ್ 17 ರಂದು  (18 Dhul-Hijjah 35 AH) ಸೌದಿ ಅರೇಬಿಯಾದ ಮದೀನಾ ಎಂಬ ಪ್ರದೇದಲ್ಲಿ ವಿಧಿವಶರಾದರು. *ಆಡಳಿತ, ತ್ಯಾಗ, ಮರಣ*....           ಇಸ್ಲಾಮಿನ ಇತಿಹಾಸದಲ್ಲಿ ಕೊಟ್ಯಾದಿಪತಿಯಾದ ಶ್ರೀಮಂತರಾದ ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ ರವರು ರಹಸ್ಯವಾಗಿಯೂ ಪರಸ್ಯವಾಗಿಯೂ ಕೊಡುಗೈ ದಾನಿಯಾಗಿದ್ದರು. ಇವರು ಪ್ರವಾದಿ ಮಹಮ್ಮದ್ ಮುಸ್ತಫಾ ಸ.ಅ ರವರ ಸ್ವರ್ಗಲೋಕದ ಆತ್ಮೀಯ ಗೆಳೆಯನಾಗಿದ್ದಾರೆಂದು ಹದೀಸ್'ಗಳಲ್ಲಿ ಕಾಣಬಹುದು. ಪ್ರವಾದಿ ಮಹಮ್ಮದ್ ಸ.ಅ ರವರು ಜೀವಿತಾವಧಿಯಲ್ಲೇ ಅನಸ್ ರ.ಅ ರವರೊಂದಿಗೆ ಹೇಳುತ್ತಾರೆ, ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ ರವರು ತನ್ನ ತ್ಯಾಗದ ಫಲವಾಗಿ ಅವರಿಗೆ ಸ್ವರ್ಗಲೋಕವು ನಿಶ್ಚಯವಾಗಿ...

*ನಕಲಿ ಹಾವಳಿ*

*ನಕಲಿ ಹಾವಳಿ* ನಕಲಿ ಗಾಂಧಿಯರೆಡೆಯಲಿ ಅಸಲಿ ಗಾಂಧಿಯು ಮರೆಯಾದವೇ..? ಕೊಳ್ಳೆ ಹೊಡೆಯಲು ನೆನಪು ಉಳಿಯಿತು ಗಾಂಧಿ ನೋಟದು ಮಾತ್ರವೇ..!!! ಖಾದಿ ವಸ್ತ್ರವ ಧರಿಸಿದವನಲಿ ಅಹಂಕಾರದೊಳೇನಿದು ನೋಟವೇ...? ಬಟ್ಟೆಗಿಲ್ಲದ ಬಡವನಿರುವನು ಅವನೆದುರು ಇವನದು ಹವ್ಯಾಸವೇ...!!! ಮನೆಯ ಕಸವನು ಗುಡಿಸದವನು ದೇಶ ಸ್ವಚ್ಚ ಹೇಗೆ ಮಾಡುವ ತಟ್ಟನೇ..? ಪರರ ಮೆಚ್ಚಿಸಲು ಬಂದ ತಂಡವು ಸ್ವ ಪ್ರಚಾರಕೆ ನೋಟನು ಕೊಟ್ಟನೇ...!! ದೋಚಿ ಬಾಚಿದ ಹೊಟ್ಟೆ ಬಾಕರು ತಿಂಡು ತೇಗುತ ಹೋದರೇ...? ಗಾಂಧಿ ಹೆಸರನು ಬಳಸಿ ಕಲಸುತ ಉಂಡು ಕೊಂಡು ಹೋದರೇ...!!! ಜಾತಿ ನೆಪದಲಿ ದಿನವ ದೂಡುತ ಅಂಟುರೋಗ ಜ್ವರವನು ಬಿಟ್ಟರೇ...? ಜ್ಯೋತಿ ಬೆಳಗುವ ದೇಶ ದೊರೆಗಳು ಗಂಟು ಕೂಡಿಸಿ ಇಟ್ಟರೇ...!!! ಧರಿಸಿ ಹರಸುವ ದಿನಗೆಳೆಡೆಯಲಿ ಗಾಂಧಿಯ ಅಹಿಂಸೆ ತತ್ವವು ಬೆಳೆದವೇ...? ಬಾಪುಜಿ ಬಾಳಿನ ಧ್ಯೇಯ ನೆನಪದು ದೇಶ ಉಳಿಸಲು ನೆನಪಿಸೋಣವೇ....!!! - ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್