Posts

Showing posts from October, 2015

ನಮ್ಮೊಳಗೆ ಮರೆಯಾಗುತ್ತಿರುವ.  "ಅಕ್ಷರ ಸಂತ"  ಹಾಜಬ್ಬ ----------------------------

ನಮ್ಮೊಳಗೆ ಮರೆಯಾಗುತ್ತಿರುವ.  "ಅಕ್ಷರ ಸಂತ"  ಹಾಜಬ್ಬ ----------------------------                 ✒ N.U.T (ತಬೂಕ್)      ಅದೊಂದು ಪುಟ್ಟ ಊರು, ದಕ್ಷಿಣ ಕನ್ನಡ ಜಿಲ್ಲೆಯ ದೇರಳಕಟ್ಟೆ ಸಮೀಪದ ಪುಟ್ಟ ಊರೇ ಹರೇಕಳ. ಅಲ್ಲಿ ಒಬ್ಬರು ಬೀದಿ ಬದಿ ವ್ಯಾಪರಸ್ಥರು, ಅವರ ಹೆಸರೇ ಹಾಜಬ್ಬ. ಸುಮಾರು ಅರುವತ್ತು ವರ್ಷ ಪ್ರಾಯದ ಈ ವ್ಯಕ್ತಿ ಬೆಳೆಗ್ಗೆ ಎದ್ದು ಬಸ್ಸು ಹತ್ತಿ ದೂರದ ಮಂಗಳೂರಿಗೆ ತೆರಳಿ, ಅಲ್ಲಿನ ಪರಿಸರದಲ್ಲಿ ಕಿತ್ತಳೆ ಮಾರುತ್ತಲೇ ಜೀವನ ಸಾಗಿಸಿದವರು.     ವಿದ್ಯಭ್ಯಾಸದ ಬಗ್ಗೆ ಅರಿವೇ ಇಲ್ಲದ ಇವರ ಆಡು ಬಾಷೆ ಬ್ಯಾರಿ ಬಿಟ್ಟರೆ ಬೇರೇನು ತಿಳಿದವರಲ್ಲ. ಊರಿನಲ್ಲಿ ತನ್ನ ಹಾಗೆ ಅಕ್ಷರ ಜ್ಞಾನವಿಲ್ಲದ ಮಕ್ಕಳು ಹೆಚ್ಚಾಗುದನ್ನು ಮನಗಂಡ ಈ ಬೀದಿ ಬದಿ ವ್ಯಾಪಾರಸ್ತ, ಕೈಗೊಂಡ ಆ ಮಹಾ ಯೋಜನೆಗೆ ಎಷ್ಟು ಅಭಿನಂದಿಸಿದರೂ ಸಾಲದು.    * ಹರೇಕಳ ಹಾಜಬ್ಬರ ಸಾಧನೆ:=        ಹರೇಕಳದ ಸಮೀಪ ಸ್ವಲ್ಪ ಕಾಲಿ ಪ್ರದೇಶದ ಬಗ್ಗೆ ವಿವರ ಅರೆತವರೇ ಈ ಹಾಜಬ್ಬ,  ಓರ್ವ ಕೇರಳದ ಹೆಸರಾಂತ ವ್ಯಕ್ತಿಯ ಬಳಿ ಸಹಾಯ ಯಾಚಿಸಿ ಅಂದಿನ 5000 ರೂ ಪಡೆದುಕೊಂಡರು. ತಾನು ಚಾಚಿದ ಮೊದಲ ಕೈಗೇ 5000 ರೂ ಸಿಕ್ಕಾಗ ಹಾಜಬ್ಬರ ಕನಸು ದುಪ್ಪಟ್ಟುಗೊಂಡಿತು. ತದನಂತರ ಮತ್ತೊಬ್ಬರು ಮಂಗಳೂರಿನ ಹೆಸರಾಂತ ವ್ಯಕ್ತಿಯ ...

🎋👮🏻 ಅವರೇ ನಿಜವಾದ ಸಿಪಾಯಿಗಳು 👮🏻🎋

🎋👮🏻 ಅವರೇ ನಿಜವಾದ ಸಿಪಾಯಿಗಳು 👮🏻🎋      ಅವರಿಗೂ ಇದೆ ಕುಟುಂಭ, ಮನೆ, ಮಕ್ಕಳು.    ಸಂಸಾರದೊಂದೊಂದಿಗೆ ನೂರಾರು ವರ್ಷ ಸುಖವಾದ ಜೀವನ ನಡೆಸಬೇಕೆಂಬ ಹಂಬಲವಿದೆ. ಅಲ್ಪ ಪುಡಿಗಾಸು ಮಾಡಿ ಊರಲ್ಲೊಂದು ಸಣ್ಣ  ಅಂಗಡಿ ಮಾಡಿ ಹೆಂಡತಿ ಮಕ್ಕಳೊಂದಿಗೆ ಸುಖ ಸಂಸಾರ ನಡೆಸಬೇಕೆಂಬ ಹಂಬಲವಿದೆ. ಆದರೆ....  ಆದರೆ....      ಸಮಾಜದಲ್ಲಾಗುವ ಅನ್ಯಾಯ, ದೌರ್ಜನ್ಯ, ಕೋಮುವಾದ ಇದನೆಲ್ಲ ಮನಗಂಡು ಸುಮ್ಮನಾದರೆ ಅದೆಷ್ಟು ಬಡ ಕುಟುಂಬಗಳು ಬೀದಿಪಾಲಾಗುದು ಖಂಡಿತ, ಎಂದು ಮನಗಂಡವ ಸುಮ್ಮನಿರಲು ಸಾದ್ಯವೇ.....?    ಅನ್ಯಾಯದ ವಿರುದ್ಧ  ಹೋರಾಡಲು ಸಜ್ಜಾಗಿ ನಿಂತ ಸಿಪಾಯಿಗಳವರು.        ಅವರೇ ಪಿ.ಎಫ್.ಐ (p.f.i)    ಸುಮ್ಮನಿರುವವರನ್ನು ಆಡುಭಾಷೆಯಲ್ಲಿ ನಪುಂಸಕ ಎಂದು ಕರೆದರೆ ತಪ್ಪಾಗಲಾರದು....        ಈ ಭಾರತ ದೇಶದಲ್ಲಿ ಅನ್ಯಾಯದ ವಿರುದ್ದ ಧ್ವನಿಯೆತ್ತಿದರೆ ಅವನ ಅವನತಿ ಖಂಡಿತಾ. ಬಹುಶಃ ಇಂತಹಾ ಮನಸ್ಥಿತಿ ಇರುವ ವಿಶ್ವದ ಅತ್ಯಂತ ಭಯಾನಕ ಎರಡು ದೇಶಗಳೆಂದರೆ ಒಂದು ಭಾರತ ಮತ್ತೊಂದು ಇಸ್ರೇಲ್ ಎಂದರೆ ತಪ್ಪಾಗಲಾರದು.      ಭಾರತ ವಿಶ್ವಕ್ಕೆ ಮಾದರಿ ದೇಶ....  ಆದರೆ.., ಈ ದೇಶದಲ್ಲಿರುವ ಸ್ವಯಂಘೋಷಿತ ದೇಶ ಭಕ್ತರು ಮಾಡುತ್ತಿರುವ ಅನ್ಯಾಯ, ಹೀನಾಯ ಕೃತ್ಯ, ಭಾರತ ...

ತಪ್ಪದೇ ಓದಿ ಸತ್ಯ ಘಟನೆ.... ನೆರೆ ಮನೆಯವನ ಮೋಸದ ಪ್ರೀತಿಗೆ ಬಲಿಯಾದಲೇ ರಮ್ಯಾ...?

ತಪ್ಪದೇ ಓದಿ ಸತ್ಯ ಘಟನೆ.... ನೆರೆ ಮನೆಯವನ ಮೋಸದ ಪ್ರೀತಿಗೆ ಬಲಿಯಾದಲೇ ರಮ್ಯಾ...?           ಅದೊಂದು ಬಡ ಹಿಂದೂ ಕುಟುಂಭ. ಒಂದು ಹೆಣ್ಣು ಎರಡು ಗಂಡು ಮಕ್ಕಳೊಂದಿಗೆ ಸುಖವಾಗಿ ಜೀವಿಸುತಿದ್ದ ಶ್ರಮ ಜೀವಿಗಳು. ಉಪ್ಪಿನಂಗಡಿಯಿಂದ ನಮ್ಮ ಮನೆಗೆ ಸುಮಾರು ನಾಲ್ಕು ಕಿಲೋ ಮೀಟರ್ ದೂರವಿದೆ. ನಮ್ಮ ಮನೆಯ ಸಮೀಪ ಅವರು ವಾಸಿಸುತಿದ್ದರು. ಅವರ ತಂದೆ ದಿನಾಲು ಬೆಳಿಗ್ಗೆ ನಾಲ್ಕು ಘಂಟೆಗೆ ಕಾಲ್ನಡಿಗೆಯಲ್ಲೇ ನಾಲ್ಕು ಕಿ.ಮೀ ಕ್ರಮಿಸಿ ರಾತ್ರಿ ಎಂಟು ಘಂಟೆಗೆ ನಾಲ್ಕು ಕಿ.ಮೀ ಕಾಲ್ನಡಿಗೆಯಲ್ಲೇ ಕ್ರಮಿಸಿ ಕೆಲಸಕ್ಕೆ ತೆರಳುತ್ತಿದ್ದರು. ಉಪ್ಪಿನಂಗಡಿಯ ಹೆಸರಾಂತ ಹೋಟೇಲೊಂದರಲ್ಲಿ ಕೆಲಸ ಮಾಡುತಿದ್ದ ಅವರು ಸಿಕ್ಕ ಅಲ್ಪ ಸ್ವಲ್ಪ ಹಣವನ್ನು ಕೂಡಿಟ್ಟು ತನ್ನ ದೊಡ್ಡ ಮಗಳ ಮದುವೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಉಳಿದಿಬ್ಬರು ಗಂಡು ಮಕ್ಕಳು ಇನ್ನು ಕಾಲೇಜು ವ್ಯಾಸಾಂಗ ಮಾಡುತ್ತಿದ್ದರು.          ತಾಯಿ ಕೂಡಾ ಶ್ರಮ ಜೀವಿ.  ನೆರೆ ಹೊರೆಯವರೊಂದಿಗೆ ಉತ್ತಮ ಭಾಂಧವ್ಯ, ವಿನಯತೆ, ಮತ್ತೆ ನಾವು ಅನ್ಯ ಧರ್ಮದವರಾಗಿದ್ದರೂ ಸದಾ ಪ್ರೀತಿಯಿಂದಲೇ ಮಾತಾಡಿಸುತಿದ್ದರು.        ದೊಡ್ಡವಳಾದ ಹೆಣ್ಣು ಮಗಳು ರಮ್ಯಾ(ಹೆಸರು ಬದಲಿಸಲಾಗಿದೆ) ದ್ವಿತಿಯ ಪಿ.ಯು.ಸಿ ಮುಗಿಸಿ ಮನೆಯಲ್ಲಿದ್ದಳು. ಮದುವೆ ಪ್ರಾಯ ಆದ್ದರಿಂದ ತಂದೆ ತಾಯಿಯ ಶ್ರಮದಿಂದ ಒಂದು ಹುಡುಗನ ಕಂಡು...

ಹಿಂದುತ್ವವಾದಿಗಳ ನಾಟಕಕ್ಕೆ ಬಲಿಯಾಗುತ್ತಿರುವ ಭಾರತೀಯರು......

ಹಿಂದುತ್ವವಾದಿಗಳ ನಾಟಕಕ್ಕೆ ಬಲಿಯಾಗುತ್ತಿರುವ ಭಾರತೀಯರು......      ಇದೇನೋ ವಿಚಿತ್ರವಾಗಿದೆ. ದೂರದ ಅಫ್ಘಾನಿಸ್ಥಾನ, ಪಾಕಿಸ್ತಾನ, ಇಸ್ರೇಲ್, ಸಿರಿಯಾದಂತಹಾ ದೇಶಗಳಲ್ಲಿ ಮನಷ್ಯರನ್ನು ಮಾನವೀತೆ ಇಲ್ಲದೆ ನಡು ಬೀದಿಗಳಲ್ಲಿ ಕೊಲ್ಲುವ ಚಿತ್ರಗಳು ಕಂಡು ಬೆಚ್ಚಿ ಬೀಳುತಿದ್ದ ನಾವಿಂದು ಈ ಒಂದು ದಸ್ಥಿತಿಯನ್ನು ಇದೀಗ ಭಾರತ ದೇಶದಲ್ಲಿ ಕಾಣಲು ಸಾಧ್ಯವಾಗುತ್ತಿದೆ.          ಹೌದು ಇದಕ್ಕೆಲ್ಲ ಕಾರಣ ಸ್ವಧರ್ಮ, ರಾಮರಾಜ್ಯ, ಕೇಸರೀಕರಣ ಎಂಬಿತ್ಯಾದಿ ಅಜೆಂಡಗಳು. ಕೆಲ ಹಿಂದುತ್ವವಾದಿಗಳ ವಿಕೃತ ಮನಸ್ಸಿನ ಪರಿಯಾಗಿ ಮನುಷ್ಯನನ್ನು ಕೊಲ್ಲಲು ಹಿಂಜರಿಯದ ಮನುಷ್ಯರ ಮಧ್ಯೆ ಉಳಿದವರ ಬಾಳು ಅಲ್ಲೋಲ ಕಲ್ಲೋಲವಾಗುತ್ತಿದೆ.        ಹಿಂದೂ ರಾಷ್ಟ್ರದ ಕನಸು ಕಾಣುತ್ತಿರುವ ಹಿಂದುತ್ವವಾದಿಗಳ ಅಜೆಂಡಾಗಳನ್ನು ಸಾರ್ಥಕಗೊಳಿಸುವ ಸಲುವಾಗಿ ವ್ಯವಸ್ಥಿತ ಶಡ್ಯಂತ್ರದಂತೆ, ಲೌ ಜಿಹಾದ್, ಗೊ ಮಾತಾ, ದೇಶ ಭಕ್ತಿ, ಭಯೋತ್ಪಾದನೆ ಮುಂತಾದ ಆರೋಪಗಳನ್ನು  ಮುಸ್ಲಿಮರ ಮೇಲೆ ಹಾಕಿ ದೌರ್ಜನ್ಯವೆಸಗಿ ಸಮಾಜದ ಮುಂದೆ ಅಲ್ಪಸಂಖ್ಯಾತರು ಕೆಟ್ಟವರೆಂದು ಬಿಂಬಿಸುತ್ತಾ ಬಂದಿದೆ.       ತನ್ನ ವ್ಯವಸ್ಥಿತ ಶಡ್ಯಂತ್ರಗಳು ಒಂದೊಂದೇ ಬಯಲಾಗುತ್ತಿದ್ದರೂ ಅದನ್ನು ಮುಚ್ಚಿಹಾಕಲು ಹರಸಾಹಸ ಪಡುತ್ತಿದ್ದು ತನ್ನದೇ ಚೇಳಾಗಳಾದ, ಕೆಲ ಮಾಧ್ಯಮದವರು ಹಾಗು 60% ಪೋಲೀಸರು ಇದಕ್ಕೆಲ್ಲ ಸಂಪ...

ಎಚ್ಚೆತ್ತುಕೊಳ್ಳೊಣ ನಮ್ಮನ್ನು ದಮನಿಸುವ ಮೊದಲು.....

ಎಚ್ಚೆತ್ತುಕೊಳ್ಳೊಣ ನಮ್ಮನ್ನು ದಮನಿಸುವ ಮೊದಲು.....       ಏನೆಲ್ಲಾ ಶಡ್ಯಂತ್ರಗಳು, ಏನೆಲ್ಲಾ ಆರೋಪಗಳು ಜೊತೆಗೆ ಒಂದಿಷ್ಟು ಒತ್ತಾಯಪೂರ್ವ ಯೋಜನೆಗಳು...  ಒಟ್ಟಾರೆಯಾಗಿ ಮುಸಲ್ಮಾನರ ಅದಪತನವನ್ನು ತುದಿಗಳಲ್ಲಿ ನಿಂತು ಕಾಯುತ್ತಿರುವ ಕೆಲ ಹಿಂಧುತ್ವವಾದಿಗಳೆದುರು ಇನ್ನೂ ನಾವು ಎಚ್ಚರಗೊಳ್ಳದಿದ್ದರೆ ನಮ್ಮನ್ನು ಮಟ್ಟಹಾಕಳು ನಾವೇ ಧಾರಿಮಾಡಿಕೊಟ್ಟಂಗಾದಿತು.....         ದೇಶದಲ್ಲಿ ಇಷ್ಟೆಲ್ಲಾ ಮಾದ್ಯಮಗಳಲ್ಲಿ ಹಿಂದುತ್ವವಾದಿಗಳ ಬಣ್ಣ ಬಯಲಾಗುತ್ತಿದ್ದರೂ, ಕೇವಲ ಸಾಮಾಜಿಕತಾಣಗಳ ಮೂಲಕ ಬೊಬ್ಬೆಹೊಡೆಯುವ ನಾವು, ನಿಜವಾಗಿ ಅವರ ಹಣೆಬರಹವನ್ನು ಬಿಚ್ಚಿಡಬೇಕಾದದ್ದು, ಮನೆಯಲ್ಲಿ ಮೂಲ ಸೌಕರ್ಯದ ಕೊರತೆ ಇರುವ ಬಡ ಹಿಂದೂ ಕುಟುಂಬಗಳ ಮನೆ ಮತ್ತು ಮನದಲ್ಲಿ.      ಹೌದು ಯಾಕೆಂದರೆ..., ಒಂದುರೀತಿಯಾಗಿ ಗಲಭೆಗಳಿಗೆ, ದೇಶ ಭಕ್ತಿ ಎಂದು ಸುಳ್ಳು ಇತಿಹಾಸ ಸೃಷ್ಟಿಸಿ ಅವರ ಮನ ಪರಿವರ್ತನೆಗೊಳಿಸಿ ಅಮಾಯಕರಲ್ಲಿ ಮುಸ್ಲಿಮರು ನಮ್ಮ ಅಜೇಯ ಶತ್ರುಗಳು ಎಂದು ಬಿಂಬಿಸಿ ಕೋಮುಗಲಭೆಗೆ ಪ್ರಚೋದಿಸುತ್ತಿದ್ದಾರೆ.           ಉತ್ತರ ಭಾರತದ ಕೆಲ ಪ್ರದೇಶಗಳಲ್ಲಿ ಗಲಭೆಗಳಿಗೆ ಇದೇ ಕಾರಣ.  ಅಲ್ಲಿ ದೂರದರ್ಶನವಿಲ್ಲ ಬದಲಾಗಿ ಆರೆಸ್ಸೆಸ್ ಶಾಖೆಗಳಿವೆ. ಇದುವೇ ದೊಡ್ಡ ವಿಪರ್ಯಾಸ.  ಹಿಂದುತ್ವ ವಾದಿಗಳ ನಾಲ್ಕು ಮಸಾಲೆಭರಿತ ಮಾತುಗಳಿಗೆ ಮರುಳಾ...