ಮೊಹಿಯದ್ದೀನ್ ಜುಮಾ ಮಸೀದಿ ಪೆರಿಯಡ್ಕ ಇದರ ಆಶ್ರಯದಲ್ಲಿ ಜರುಗುವ ಖತಮುಲ್ ಖುರ್ ಆನ್ ಮತ್ತು ತಹ್ಲೀಲ್ ಸಮರ್ಪಣಾ ಕಾರ್ಯಕ್ರಮವು ದಿನಾಂಕ 05/08/2018 ರಂದು ಬೆಳಿಗ್ಗೆ 10 ಘಂಟೆಗೆ ಪೆರಿಯಡ್ಕ ಜುಮಾ ಮಸೀದಿ ಇದರ ಸಭಾಂಗಣದಲ್ಲಿ ಜರುಗಳಿದೆ. ಕಾರ್ಯಕ್ರಮದ ನೇತೃತ್ವ ಹಾಗೂ ದುಃಆವನ್ನು ಸೈಯದ್ ಹಾಶಿರ್ ಅಲೀ ಶಿಹಾಬ್ ತಂಙಲ್, ಪಾಣಕ್ಕಾಡ್ ವಹಿಸಲಿದ್ದು ಅಧ್ಯಕ್ಷತೆಯನ್ನು ಕೆ.ಪಿ ಬಶೀರ್ ಅಧ್ಯಕ್ಷರು mjm ಪೆರಿಯಡ್ಕ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟಣೆ ಉಮರ್ ದಾರಿಮಿ, ಖತೀಬರು MJM ಪೆರಿಯಡ್ಕ ನಡೆಸಲಿದ್ದಾರೆ. ಮುಖ್ಯ ಅತಿಥಿಗಳು ಜ|| ಯು ಟಿ ಖಾದರ್ ( ವಸತಿ & ನಗರ ಸಚಿವರು ಕರ್ಣಾಟಕ), ಬಹು ಸಿ ಎಂ ಅನ್ಸಾರ್ ಫೈಝೀ ಅಲ್ ಬುರ್ಹಾನಿ (ಮುದರ್ರಿಸ್ ಕಣ್ಣೂರು) ಹಾಜೀ ಮುಸ್ತಫಾ ಕೆಂಪಿ (ಅಧ್ಯಕ್ಷರು JM ಉಪ್ಪಿನಂಗಡಿ ) ಹಾಗೂ ಹಲವಾರು ಸಾಮಾಜಿಕ, ಧಾರ್ಮಿಕ ಮುಖಂಡರೂ ಭಾಗವಹಿಸಲಿದ್ದಾರೆ. ಸ್ಥಳೀಯ 30 ಧಾರ್ಮಿಕ ಗುರುಗಳ ನೇತೃತ್ವದಲ್ಲಿ ನಡೆಯಲಿರುವ ಖತಮುಲ್ ಕುರ್ ಆನ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸ್ಥಳವಕಾಶವಿದ್ದು, ಕಾರ್ಯಕ್ರಮದ ನಂತರ ಅನ್ನದಾನ ನಡೆಯಲಿದೆ.