ಅದು ಅದ್ಭುತಗಳ ಗೂಡು " *ಊಹಿಸಲಾಗದ ಸತ್ಯ....!!* ಭಾಗ 9
ಅದೊಂದು ಪ್ರಶಾಂತ ಪ್ರದೇಶವಲ್ಲವೇ.. ತನ್ನವರು, ತಿಳಿದವರು, ಅಹಂಕಾರಿಯೂ ಬಡ ಬಲ್ಲಿಗನೂ ವಾಸಿಸಲಿರುವ ಅಗಾಧ ಸ್ಥಳವಲ್ಲವೇ.. ಖಬರ್. ನಾವು ಆಗ್ರಹಿಸಿದರೂ... ಆಗ್ರಹಿಸದಿದ್ದರೂ ಖಬರಿನಿಂದ ಹಾಗೂ ಅಲ್ಲಿನ ಶಿಕ್ಷೆಯಿಂದ ನಮಗೆ ರಕ್ಷೆ ಇಲ್ಲವೇ ಇಲ್ಲ. ಅನುಭವಿಸುವವರು ನಾವು ಎಲ್ಲವೂ ಅನುಭವಿಸಲೇಬೇಕು. ಇಂದು ಮರಣ ಹೊಂದಿದವನ ದಫನ ಮಾಡಿ ಬಂದವನು ನಾಳೆ ಸ್ವ ಮಲಗಬೇಕಾದ ಜಾಗವೇ ಖಬರ್... *"ನಾವು ಸ್ವ ಇಚ್ಛೆಯಿಂದ ಇಲ್ಲಿ ಬಂದವರಲ್ಲ..* *ನಾಳೆ ಸ್ವ ಇಚ್ಛೆಯಿಂದ ತೆರಳುವವರೂ ಅಲ್ಲ.."* ಎಲ್ಲವೂ ಅಲ್ಲಾಹನ ಇಚ್ಛೆ... ಖಬರಿನಲ್ಲಿ ಕೆಲವರಿಗೆ ಶಿಕ್ಷೆ ಇನ್ನೂ ಕೆಲವರಿಗೆ ರಕ್ಷೆ... ಜೀವನವೆಂಬ ಯಾತ್ರೆಯಲ್ಲಿ ತಾನು ಮಾಡಿದ ಕರ್ಮದ ಫಲ ಅವನು ಖಂಡಿತವಾಗಿಯೂ ಅನುಭವಿಸುಲರಿವನು.. ಕೆಲವು ಧರ್ಮದ ಜನರ ನಂಬಿಕೆ,,, ಇದೆಲ್ಲವೂ ಸುಳ್ಳು, ಅದರಲ್ಲೇನು ಮರ್ಮವಿಲ್ಲವೆಂದು. ಆದರೆ,, ಇತಿಹಾಸದ ಪುರಾವೆಗಳು ಇಸ್ಲಾಂ ಧರ್ಮದಲ್ಲಿ ಬಹಳಷ್ಟಿದೆ. ಅದರ ಕೆಲ ಭಾಗಗಳನ್ನು ನಾ ಕಳೆದ ಸಂಚಿಕೆಯಲ್ಲಿ ತಿಳಿಸಿದ್ದೇನೆ.. ನೋಡಿ ಸಹೋದರರೆ ಇದು ಅಲ್ಲಾಹನು ತಮಗೆ ನೀಡುವ ಖಬರಿನ ಶಿಕ್ಷೆಯಾಗಿದೆ. ಈ ರೀತಿಯ ಲೈವ್ ಶಿಕ್ಷೆಗಳನ್ನು ಹಲವು ಸ್ವಹಾಬಿಗಳು, ಪಂಡಿತರು.. ಕಣ್ಣಾರೆ ಕಂಡಿದ್ದಾರೆ. ...