Posts

Showing posts from July, 2016

ಉಮರ್ ರ.ಅ 2

*ಉಮರ್ ರ.ಅ ರವರ*       *ನ್ಯಾಯಸಮ್ಮತ ಆಡಳಿತ*            ಉಮರ್ ರ.ಅ ರವರು ಇಸ್ಲಾಂ ಧರ್ಮ ಸ್ವೀಕಾರದ ನಂತರ, ನೆಬಿ ಸ.ಅ ವಫಾತಿನ ನಂತರ ಅಬೂಬಕ್ಕರ್ ಸಿದ್ದೀಕ್ ರ.ಅ ರವರ ಕಾಲಾನಂತರ ಎರಡನೇ ಖಲೀಫರಾಗಿ ಅಧಿಕಾರಕ್ಕೇರಿದರು. ತನ್ನ ಧರ್ಮನಿಷ್ಠೆ, ಕಾಳಜಿ, ನ್ಯಾಯ, ಕರುಣೆ, ವಿನಯ ಹಾಗೂ ಆಡಳಿತದಲ್ಲಿ ಜಗತ್ತನ್ನೇ ಅಚ್ಚರಿಗೊಳಿಸಿದ್ದರು. ಅವರ ಜೀವಾನಾದರ್ಶವೇ ಇಂದಿನ ಆಧುನಿಕ ನಾಯಕರ ಕನಸು. ಆದರೆ ಹಣ ಹಾಗೂ ಅಧಿಕಾರದ ವ್ಯಾಮೋಹ ಹಾಗೂ ಪೈಪೋಟಿಯ ಆಡಳಿತದ ನಡುವೆ ಉತ್ತಮ ಆಡಳಿತದ ಕನಸು ಕಮರಿಹೋಗುತ್ತಿದೆ.                *******            ಉಮರ್ ರ.ಅ ಆಡಳಿತದ ಅಂದಿನ ಕಾಲಘಟ್ಟದ  ಜನ ನಿವಾಸಿಗಳು ನ್ಯಾಯಯುತವಾಗಿ ಜೀವಿಸುತಿದ್ದರು. ಉಮರ್ ರ.ಅ ಎಷ್ಟು ವಿನಯವಂತರೆಂದರೆ, ತಮ್ಮ ಆಡಳಿತಾ ದಿನಗಳಲ್ಲಿ ಯಾರಿಗೂ ಅರಿಯದಂತೆ ಪ್ರತೀದಿನ ರಾತ್ರಿ ಒಂದು ಮನೆಗೆ ಭೇಟಿ ಕೊಡುತಿದ್ದರು. ಇದನ್ನು ಮನಗಂಡ ಓರ್ವ ಸ್ವಹಾಬಿ ಇವರ ಈ ಅಚ್ಚರಿಯ ಭೇಟಿಯ ರಹಸ್ಯ ಭೇಧಿಸಲು ಒಂದು ದಿನ ರಾತ್ರಿ ಅಡಗಿ ಕುಳಿತು ವೀಕ್ಷಿಸಿದರು. ಅಂದು ರಾತ್ರಿಯೂ ಉಮರ್ ರ.ಅ ರವರು ಆ ಮನೆಗೆ ಭೇಟಿ ನೀಡಿದರು. ಅಲ್ಪ ಸಮಯದ ನಂತರ ಅವರು ಆ ಮನೆಯಿಂದ ತೆರಳಿದರು. ಆ ಸ್ವಹಾಬಿ ಆ ಮನೆಯ ಒಳಗೆ ಭೇಟಿ ನೀಡಿದರು. ಆದರೆ ಅಲ್ಲಿ ಒಂದು ಕಣ್ಣು ಸರಿಯ...

ಉಮರ್ ರ.ಅ

#ಪ್ರಪಂಚವೇ_ನಿಬ್ಬೆರಗಾದ_ದಿನವದು #ಉಮರ್_ರಅ #ರವರ_ಇಸ್ಲಾಂ_ಸ್ವೀಕಾರ         ಕತ್ತಾಬ್ ಎನ್ನವ ಆಡುಗಳ ಸಾಕುವ ಒಬ್ಬ ವ್ಯಕ್ತಿ ಮಕ್ಕಾದಲ್ಲಿದ್ದು, ಹಲವಾರು ಮಡದಿಯರಿದ್ದರೂ ಮಕ್ಕಳಾಗಿರಲಿಲ್ಲ. ಕೆಲ ದಿನಗಳ ನಂತರ ಮಡದಿಯರಲ್ಲಿ ಒಬ್ಬಳಾದ ಹಂತಮಾ ಬಿನ್ತ್ ಹಾಶಿಮ್ ಎನ್ನುವ ಮಡದಿ ಕಿ.ಶ 583 ರಲ್ಲಿ ಮಕ್ಕಾ ಎಂಬ ಪ್ರದೇಶದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ನೋಡಲು ಸುಂದರನೂ, ದಷ್ಟ ಪುಷ್ಟವಾಗಿದ್ದ ಮಗುವನ್ನು ಕಂಡು ಅಲ್ಪ ಖುಷಿಪಟ್ಟ ಕತ್ತಾಬ್ ಮಗುವಿಗೆ ಉಮರ್ ಎಂದು ನಾಮಕರಣ ಮಾಡಿದ. ನಂತರ ಮಡದಿಯ ಪ್ರಸವದ ಬಗ್ಗೆ ಸಂತೋಷಗೊಂಡು ಊರಲ್ಲೆಲ್ಲ ಸಿಹಿ ತಿಂಡಿ ಹಂಚಿದ.        ದಿನ ಕಳೆದಂತೆ ಮಗು ಉಮರ್ ಬೆಳೆಯತೊಡಗಿದರು.  ತಂದೆ ಕತ್ತಾಬರಲ್ಲಿ ಮಗ ಬೆಳೆದು ದೊಡ್ಡವನಾದಲ್ಲಿ ಆಡು ಮೇಯಿಸಲು ಸಹಕಾರಿಯಾಗಬಹುದು, ನನಗೂ ಸ್ವಲ್ಪ ಆರಾಮ ಸಿಗಬಹುದೆಂದು ಮನಸ್ಸಿನಲ್ಲೆ ತೃಪ್ತಿ ಪಟ್ಟುಕೊಂಡಿದ್ದರು. ಮಗ ಉಮರಿನ ಬೆಳವನಣಿಗೆಯೂ... ದಷ್ಟ ಪುಷ್ಟನಾಗಿ ಉದ್ದದ ಕಾಲುಗಳು ಹೊಂದಿದ್ದರು.            ಒಂದು ದಿನ ಬೆಟ್ಟದ ಕಡೆ ಆಡು ಮೇಯಿಸಲು ಉಮರ್ ರ.ಅ   ತಂದೆ ಕತ್ತಾಬರು ಹಳುಹಿಸಿಕೊಟ್ಟರು. ಅದರೆ ಅಲ್ಲಿ ಒಂದು ಆಡು ಸತ್ತು ಹೋಯಿತು. ಆದರೆ ಸಂಜೆ ಮರಳುವ ವೇಳೆಗೆ ತನ್ನ ಅಜಾಗರೂಕತೆಯಿಂದ ಕೂಟದ ಆಡುಗಳಲ್ಲಿ ಒಂದು ಆಡು ಸತ್ತು ಹೋದ ವಿಷಯ ಅರಿತ ತಂದೆ ಕತ್ತಾಬರು, ಮಗ...

ಹಂಝ ರ.ಅ

*"ಸಾಹಸ ಸಿಂಹ" ಶಹೀದ್ ಹಂಝ (ರ.ಅ)*        ಲೋಕ ಪ್ರವಾದಿ ಮಹಮ್ಮದ್ ಮಸ್ತಫಾ ಸ.ಅ ರವರ ಚಿಕ್ಕಪ್ಪರಾದ ಹಂಝ ರ.ಅ ರವರ ಜೀವನ ಹಾಗೂ ಅವರ ವ್ಯಕ್ತಿತ್ವ ಮತ್ತು ಪ್ರವಾದಿ ಪ್ರೇಮವನ್ನು ಇತಿಹಾಸ ಪುಟಗಳಿದ ನಾವು ತಿಳಿಯಬೇಕು. ಹಂಝ ರ.ಅ ರವರ ಚರಿತ್ರೆ ಬರೆಯಲು ಅದೆಷ್ಟು ಪುಟಗಳಿದ್ದರೂ ಸಾಲದು.           ಪ್ರವಾದಿ ಪ್ರೇಮ ಹಾಗೂ ಇಸ್ಲಾಂ ಧರ್ಮದ ಬಗ್ಗೆ ಕೇವಲ ಮಾತುಗಳು ಬರಹಗಳು ಮುಖಾಂತರ ಕಚ್ಚಾಡುವ  ಆಧುನಿಕ ಮುಸ್ಲಿಮರಿಗೆ ನಿಜವಾಗಿ ಹಂಝ ರ.ಅ ರವರ ರೋಮದಷ್ಟು ಧರ್ಮನಿಷ್ಟೆ, ಪ್ರವಾದಿ ಪ್ರೇಮ, ಹಾಗೂ ಧೀರತೆ ಇರಲು ಸಾಧ್ಯವೇ...?                  ನೆಬಿ ಸ.ಅ ರವರಿಗೆ ಕಿರುಕುಳ ಕೊಟ್ಟಾಗ ಅಬೂಜಾಹಿಲನ ಕೋಟೆಗೆ ನುಗ್ಗಿ ಘರ್ಜಿಸಿದ ಸಿಂಹ ಹಂಝ ರ.ಅ, ಉಹುದ್ ರಣಾಂಗಣದಲ್ಲಿ ವಿರೋಧಿಗಳೆದುರು ಘರ್ಜಿಸಿದ ಸಿಂಹವಾಗಿದ್ದರು ಈ ಹಂಝ ರ.ಅ.         ನೀರಿಲ್ಲದ ಬರುಡು ಭೂಮಿಯಾಗಿದ್ದ ಬದ್ರ್ ರಣಾಂಗಣ. ಸಹಾಬತ್ ಎಲ್ಲರೂ ನೀರಿಗಾಗಿ ಪರದಾಡುವ ಸಂಧರ್ಬ, ರಸೂಲರಾದ ಮುಹಮ್ಮದ್ ನೆಬಿ ಸ.ಅ ರವರಲ್ಲಿ ನೀರಿನ ಗಂಭೀರ ಪರಿಸ್ಥಿತಿಯನ್ನು ಹೇಳಿದಾಗ, ಅಲ್ಲಾಹನಲ್ಲಿ ಕಣ್ಣೀರಿನೊಂದಿಗೆ ಪ್ರಾರ್ಥಿಸಿದರು. ಆಗಲೇ ಸುರಿದ ಕಾರುಣ್ಯದ ಮಳೆಯ ನೀರು, ನೀರು ಎಲ್ಲೊಂದರಲ್ಲಿ ಹರಿಯುತಿತ್ತು. ನೀರನ್ನು ಶೇಖರಿಸಿಡಲು ಸ್ವಹಾಬಿಗಳ ಮಾರ್ಗ...

ಭಾಗ 13

#ಚರಿತ್ರೆಯ_ಅರೇಬಿಯಾ.... ಭಾಗ -13  n.u.t #ಝಲ್‌ಕರ್‌ನೈನ್_ಚಕ್ರವರ್ತಿ.      ಯುರೋಪ್ ರಾಷ್ಟ್ರದ ಸೋವಿಯತ್ ಜೋರ್ಜ್ ದೇಶದ ರಾಜದಾನಿಯಾದ ತಬ್ಲೀಷ್ ಎಂಬಲ್ಲಿ, ಕಿ.ಪೂರ್ವ 600 ರಲ್ಲಿ ಝಲ್‌ಕರ್‌ನೈನ್ ಚಕ್ರವರ್ತಿ ಹಾಗೂ ಅವರ ಜನತೆಯು ಜೀವಿಸುತಿದ್ದರು.   ಇವರ ಕಾಲದಲ್ಲಿ ನೂಹ್ ನೆಬಿಯವರ ಮಗನಾದ ಯಾಪಿಸ್ ಇವರ ಸಂತತಿಗಳಾಗಿದ್ದ ಯಹ್ಜೂಜ್ ಮಹ್ಜೂಜ್ ವಂಶಸ್ಥರೂ ವಾಸಿಸುತಿದ್ದರು .        ತಬ್ಲೀಷ್ ನಿಂದ ದಾರಿಯಲ್ ಪ್ರದೇಶಕ್ಕೆ ಸಂಚರಿಸುವಾಗ ಸಿಗುವ ಬೈಹತ್ ಆಕಾರದ ಬೆಟ್ಟಗಳ ತಪ್ಪಲಲ್ಲಿ ಜೀವಿಸುತಿದ್ದ ಸಮೂಹವಾಗಿತ್ತು ಯಹ್ಜೂಜ್ ಮಹ್ಜೂಜ್.  ತೀರ ಅಸಂಸ್ಕೃತಿ ಹಾಗೂ ದರೋಡೆಕೋರರಾಗಿದ್ದರು ಇವರು. ಇವರು ದಾರಿಯಲ್ ಬೆಟ್ಟವನ್ನು ದಾಟಿ ಬಂದು ಕಾಕಸಸ್ ಎಂಬ ಪ್ರದೇಶದಲ್ಲಿ ದರೋಡೆ ನಡೆಸುತಿದ್ದರು.      ಇವರ ದರೋಡೆಯ ಸಂಖ್ಯೆಯು ಹೆಚ್ಚಾಗತೊಡಗಿದಾಗ ಅವರಿಂದ ನಮ್ಮನ್ನು ರಕ್ಷಿಸುವಂತೆ ಜೋರ್ಜಿಯನ್ ದೇಶದ ಜನತೆ ಝಲ್‌ಕರ್‌ನೈನ್ ಚಕ್ರವರ್ತಿಯಲ್ಲಿ ಬೇಡಿಕೆ ಇಟ್ಟರು.               ಆಗ ಝಲ್‌ಕರ್‌ನೈನ್ ಹೇಳಿದರು. ನೀವು ಜನ ಬಲದ ಮೂಲಕ ನನಗೆ ನೆರವಾಗಿರಿ. ನಾನು ನಿಮ್ಮ ಹಾಗೂ ಅವರ ನಡುವೆ ಒಂದು ತಡೆಗೋಡೆಯನ್ನು ನಿರ್ಮಿಸುವೆನು. ಮತ್ತೆ  ನನಗೆ ಉಕ್ಕಿನ ಹಾಳೆಗಳನ್ನು ತಂದು ಕೊಡಿರಿ. ಹೀಗೆ, ಅವರು ಎರಡು ಪರ್ವತಗಳ ನಡ...

ಭಾಗ 12

*ಚರಿತ್ರೆಯ ಅರೇಬಿಯಾ.. ಭಾಗ 12   n.u.t* *ಮಸ್ಜಿದುಲ್ ಅಕ್ಸಾ...*   ಮುಸ್ಲಿಮರ ಪವಿತ್ರ ಕ್ಷೇತ್ರವಾದ ಮಕ್ಕಾವನ್ಪು ಖಿಬ್ಲಾ (ಕೇಂದ್ರ) ಮಾಡುವ ಮೊದಲು, ಈ ಮಸ್ಜಿದುಲ್ ಅಕ್ಸಾದ ಕಡೆಗೆ ತಿರುಗಿ ಆಗಿತ್ತು ಮುಸ್ಲಿಮರು ಪ್ರಾರ್ಥನೆ (ನಮಾಝ್) ಮಾಡುತ್ತಿದ್ದರು. ವಿಶ್ವದ ಮೂರು ಶ್ರೇಷ್ಠ ಮಸೀದಿಗಳಾಗಿದೆ ಮಕ್ಕಾದ ಮಸ್ಜಿದುಲ್ ಹರಂ, ಮದೀನಾದ ಮಸ್ಜಿದುಲ್ ನಬವಿ, ಹಾಗೂ ಪೆಲೆಸ್ತೀನಿನ ಈ ಮಸ್ಜಿದುಲ್ ಅಕ್ಸಾ ಅಥವಾ ಬೈತುಲ್ ಮಕದ್ದಸ್.       ಈ ಮಸೀದಿಯು ಪೆಲೆಸ್ತೀನಿನ ಜೆರುಸಲೇಂನಲ್ಲಿ ಇದೆ. ಈ ಮಸೀದಿಯನ್ನು ಸುಲೈಮಾನ್ ನೆಬಿಯು ನಿರ್ಮಿಸಿದ್ದಾರೆ. ಹಲೇಯ ಮಸೀದಿ ಇದ್ದ ಸ್ಥಳದಲ್ಲೇ ಉಮರ್ ಇಬ್ನು ಖತ್ತಾಬ್ ರ.ಅ ಹಾಗೂ ತದನಂತರ ಹುಮವೀ ಖಲೀಫ ಅಬ್ದುಲ್ ಮಲಿಕ್ ನಿರ್ಮಿಸಿದ ಸೌಧವಾಗಿದೆ, ಕುಬ್ಬತು ಸುಖ್ರಾ ಅಥವಾ ಡೋಮ್ ಆಫ್ ದಿ ರಾಕ್. *ಯೂನುಸ್ ನೆಬಿ (ಅ.ಸ)*       ಇರಾಕ್ ದೇಶದ ರಾಜಧಾನಿ ಬಗ್ದಾದಿನಿಂದ ನಾಲ್ಕುನೂರು ಕಿ.ಮೀ ಸಂಚರಿಸಿದಾಗ ಸಿಗುವ ಪ್ರದೇಶವೇ ನೀರವ ಅಥವಾ ಮೂಸುಲ್. ಟೈಗ್ರೀಸ್ ನದಿಯ ತೀರ ಪ್ರದೇಶವಾದ ನೀರಾವಾ ಪ್ರದೇಶದ ಪ್ರವಾಜಗರಾಗಿದ್ದರು ಯೂನುಸ್ ನೆಬಿ.       ಯೂನುಸ್ ನೆಬಿಯ ಪ್ರವಚನ ಹಾಗೂ ಉಪದೇಶವನ್ನು ಆ ನಾಡಿನ ಜನರು ವಿರೋಧಿಸಲ್ಪಟ್ಟಾಗ, ಅಲ್ಲಿಯ ಜನರೊಂದಿಗೆ ಕೋಪಗೊಂಡು ಆ ಪ್ರದೇಶದಿಂದ ಹಡಗನ್ನೇರಿ ಊರು ತೊರೆದರು. ಹಡಗಿನಲ್ಲಿ ಅವಘಡ ಸಂಭವಿಸುವ ಪರಿ...

ಭಾಗ 11

*ಚರಿತ್ರೆಯ ಅರೇಬಿಯಾ ಭಾಗ - 11      n.u.t* *ಬಲ್ಕೀಸ್ ರಾಣಿ*    ಪೆಲೆಸ್ತೀನ್ ದೇಶದಲ್ಲಿ ಜೀವಿಸುತಿದ್ದ ದಾವೂದ್ ನೆಬಿಯವ ಪುತ್ರ ಸುಲೈಮಾನ್ ನೆಬಿಯವರು ತಂದೆ ಕಲಾನಂತರ ಅಧಿಕಾರಕ್ಕೇರಿದರು. ಅವರಿಗೆ ಅಲ್ಲಾಹು ನೀಡಿದ ಹಲವು ಮೂಹ್ಜಿಝತ್ತುಗಳಲ್ಲಿ ಒಂದಾಗಿತ್ತು ಪಕ್ಷಿಗಳೊಂದಿಗೆ ಮಾತಾಡುವುದು.               ಯಮನ್ ದೇಶದ ಮಗ್ರಿಬ್ ಪ್ರದೇಶದ ಹತ್ತಿರದ ಸಬಗ್ ಗೋತ್ರದವರು ಜೀವಿಸುತಿದ್ದರು. ಅವರ ರಾಣಿಯಾದ ಬಲ್ಕೀಸಿನ ನೇತೃತ್ವದಲ್ಲಿ ಸೂರ್ಯನನ್ನು ಆರಾದಿಸುತ್ತಿರುವ ವಿವವರವನ್ನು ಮರ ಕುಟುಕ ಪಕ್ಷಿಯು ಸುಲೈಮಾನ್ ನೆಬಿಯಲ್ಲಿ ತಿಳಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಸುಲೈಮಾನ್ ನೆಬಿಯು ಬಲ್ಕೀಸ್ ರಾಣಿಗೆ ಪತ್ರ ಬರೆದರು. ದೇವರ ನಾಮದಲ್ಲಿ ಆರಂಭವ ಪತ್ರದಲ್ಲಿ ಸೂರ್ಯದೇವರ ಆರಧನೆಯಲ್ಲಿ ನಿಲ್ಲಿಸುವಂತೆಯೂ, ಈ ಜಗತ್ತಿನ ಸೃಷ್ಟಿಕರ್ತನಾದ ಅಲ್ಲಾಹನನ್ನು ಮಾತ್ರ ವಿಸ್ವಾಸವಿಟ್ಟು ಸತ್ಯದ ಪಥದಲ್ಲಿ ಸಂಚರಿಸುವಂತೆಯೂ ಆ ಪತ್ರದಲ್ಲಿ ಬರೆಯಲಾಯಿತು. ಈ ಪತ್ರವನ್ನು ಪೆಲೆಸ್ತೀನ್ ನಿಂದ ಯಮನಿಗೆ ಈ ಮರಕುಟುಕ ಪಕ್ಷಿಯೇ ತಲುಪಿಸಿತು. ಪತ್ರವನ್ನು ಓದಿದ ನಂತರ ಬಲ್ಕೀಸ್ ರಾಣಿ ಹೇಳಿದರು; ಸರದಾರರೇ, ಈ ವಿಷಯದಲ್ಲಿ ನೀವು ನನಗೆ ಸಲಹೆ ನೀಡಿರಿ. ನಿಮ್ಮ ಉಪಸ್ಥಿತಿ ಇಲ್ಲದೆ ನಾನು ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ. ಆಗ ಆ ಜನಾಂಗದವರು ಪ್ರತ್ಯುತ್ತರ ನೀಡುತ್ತಾ.. ನಾವು ತುಂ...

ಭಾಗ 10

*ಚರಿತ್ರೆಯ ಅರೇಬಿಯಾ...* *ಭಾಗ - 10   n.u.t* ರಮಳಾನ್ ತಿಂಗಳ ಮೊದಲು ನಾನು ಬರೆಯುತ್ತೀದ್ದಂತಹ ಚರಿತ್ರೆಯ ಅರೇಬಿಯಾ ಇದರ ಒಂಭತ್ತು ಭಾಗಗಳ ನಂತರ ಹತ್ತನೇಯ ಭಾಗವನ್ನು ಇಂದು ನಾನು ಆರಂಬಿಸುತಿದ್ದೇನೆ.   *ಖಾರೂನ್*   ಮೂಸಾ ನೆಬಿಯ ಸಂತತಿಯಲ್ಲಿ ಜೀವಿಸಿದಂತಹದ ಒಬ್ಬ ಬಲಾಡ್ಯನು ಕಿ.ಪೂ 1300 ರಲ್ಲಿ ಇಜಿಪ್ಟ್ ದೇಶದಲ್ಲಿ ವಾಸಿಸುತಿದ್ದನು.  ಈಜಿಫ್ಟ್ ದೇಶದ ರಾಜಧಾನಿ ಕೈರೋಯಿಂದ ನೂರೈವತ್ತು ಕಿ.ಮೀ ದೂರದಲ್ಲಿ ಕಸರ್ ಕಾರೂನ್ ಎಂಬ ಸ್ಥಳದಲ್ಲಾಗಿತ್ತು ಇವನ ವಾಸ. ಈಗಲೂ ಅಲ್ಲಿ ಇವನ ದೇವಾಲಯ, ಬಾವಿ ಹಾಗೂ ಅನೆಕಟ್ಟುಗಳನ್ನು ಕಾಣಬಹುದು. ಖಾರೂನಿನ ಬಗ್ಗೆ ಪವಿತ್ರ ಕುರಾನ್ ತಿಳಿಸುದೇನೆಂದರೆ, *ಅಧ್ಯಾಯ 28: ಅಲ್‌ ಕಸಸ್ (ಕಥೆಗಳು), ಸೂಕ್ತ  76 ﺇِﻥَّ ﻗَٰﺮُﻭﻥَ ﻛَﺎﻥَ ﻣِﻦ ﻗَﻮْﻡِ ﻣُﻮﺳَﻰٰ ﻓَﺒَﻐَﻰٰ ﻋَﻠَﻴْﻬِﻢْ ۖ ﻭَءَاﺗَﻴْﻨَٰﻪُ ﻣِﻦَ ٱﻟْﻜُﻨُﻮﺯِ ﻣَﺎٓ ﺇِﻥَّ ﻣَﻔَﺎﺗِﺤَﻪُۥ ﻟَﺘَﻨُﻮٓﺃُ ﺑِﭑﻟْﻌُﺼْﺒَﺔِ ﺃُﻭ۟ﻟِﻰ ٱﻟْﻘُﻮَّﺓِ ﺇِﺫْ ﻗَﺎﻝَ ﻟَﻪُۥ ﻗَﻮْﻣُﻪُۥ ﻻَ ﺗَﻔْﺮَﺡْ ۖ ﺇِﻥَّ ٱﻟﻠَّﻪَ ﻻَ ﻳُﺤِﺐُّ ٱﻟْﻔَﺮِﺣِﻴﻦَ* ಕಾರೂನನು ಮೂಸಾರ ಜನಾಂಗದವನೇ ಆಗಿದ್ದನು ಮತ್ತು ಅವನು ಅವರ ವಿರುದ್ಧ ವಿದ್ರೋಹಿಯಾದನು. ನಾವು ಅವನಿಗೆ ಅನೇಕ ಖಜಾನೆಗಳನ್ನು ನೀಡಿದ್ದೆವು. ಎಷ್ಟೆಂದರೆ, ಅವುಗಳ ಚಾವಿಗಳು ಒಂದು ಶಕ್ತಿಶಾಲಿ ತಂಡದ ಪಾಲಿಗೂ ಭಾರವೆನಿಸುತ್ತಿದ್ದವು. ಅವನ ಜನಾಂಗವು ಅವನೊಡನೆ ಹೇಳ...

ಭಾಗ 9

#ಚರಿತ್ರೆಯ #ಅರೇಬಿಯಾ.... #ಭಾಗ - 9   n.u.t #ಈಜಿಫ್ಟಿಯನ್ #ಮ್ಯೂಸಿಯಂ ಹಾಗೂ #ಫಿರ್-#ಹೌನ್ #ಮೃತದೇಹ         ಫರೋವಾಗಳು ಉಪಯೋಗಿಸಿದ ವಸ್ತುಗಳು ಹಾಗೂ ಅವರ ಪಳೆಯುಳಿಕೆಗಳು ಕೈರೋವಿನ ಈಜಿಫ್ಟಿಯನ್ ಮ್ಯೂಸಿಯಂನಲ್ಲಿ ಶೇಖರಿಸಿಡಲಾಗಿದೆ. ಈ ಮ್ಯೂಸಿಯಂನಲ್ಲಿ  ಚಿನ್ನಾಭರಣಗಳು, ನಾಣ್ಯಗಳು,  ಈಜಿಫ್ಟ್ ಸರಕಾರ ಮೂಸಿಯಂಗೆ ರವಾನಿಸಿದ,   ಫರೋವಾಗಳ ಆ ಪಿರಮಿಡ್ ಗಳ ಒಳಗೆ ಹೂತಿಟ್ಟಿದ್ದ ಮೃತದೇಹವನ್ನು ಬಂದಿಸಿದ್ದ ಮಮ್ಮಿ (ಕಲಾಕೃತಿಯ ಪೆಟ್ಟಿಗೆಗಳು) ಇದೆ. ಇದರಲ್ಲಿ ಕೆಲವು ಮಮ್ಮಿಗಳು ಸಂಪೂರ್ಣ ಚಿನ್ನದಿಂದ ನಿರ್ಮಿಸಲಾಗಿದೆ.           ಫಿರ್ ಹೌನ ಕೂಟರಿಂದ ಅನ್ಯಾಯಕ್ಕೊಳಪಡುತ್ತಿದ್ದ ಇಸ್ರಾಯಿಲರನ್ನು ರಕ್ಷಿಸಲು ಮೂಸಾ ನೆಬಿಯು ತೀರ್ಮಾನಿಸಿದರು. ರಾತ್ರಿ ಸಮಯದಲ್ಲಿ ಮೂಸಾ ನೆಬಿಯು, ಹಾರೂನ್ ನೆಬಿಯನ್ನು ಹಾಗೂ ಸಾವಿರಾರು ಇಸ್ರಾಯಿಲರೊಂದಿಗೆ ಊರಿನಿಂದ ಪಲಾಯನ ಮಾಡಲು ತೀರ್ಮಾನಿಸಿದರು. ಈ ವಿವರ ಅರಿತ ಫಿರ್ ಹೌನ್ ದೊಡ್ಡ ಒಂದು ಸೈನ್ಯದೊಂದಿಗೆ ಅವರನ್ನು ಬಂಧಿಸಲು ಹೊರಟರು. ಸಮುದ್ರವು ಸಮೀಪಿಸುತಿದ್ದಂತೆಯೇ ಇರ್ವರೂ ಮುಖಾ ಮುಖಿಯಾದರು. ಆಗ ಅಲ್ಲಾಹನು ಮೂಸನೆಬಿಗೆ ಕಲ್ಪಿಸಿದ ವಿವರವನ್ನು ಕುರಾನ್ ವ್ಯಕ್ತಪಡಿಸುತ್ತಿದೆ. *ಅಧ್ಯಾಯ 26:* ಅಶ್ಶು ಅರಾ (ಕವಿಗಳು), ಸೂಕ್ತ  63 *ﻓَﺄَﻭْﺣَﻴْﻨَﺎٓ ﺇِﻟَﻰٰ ﻣُﻮﺳَﻰٰٓ ﺃَﻥِ ٱﺿْﺮِﺏ ﺑِّﻌَﺼَﺎﻙَ ٱﻟْﺒ...

ಭಾಗ 8

#ಚರಿತ್ರೆಯ #ಅರೇಬಿಯಾ.. #ಭಾಗ - 8  n.u.t* #ಈಜಿಫ್ಟಿನ #ಅದ್ಭುತ #ಪಿರಮಿಡ್'ಗಳು*       ಇಸ್ರಾಯಿಲರನ್ನು ಅಡಿಯಾಳುಗಲಾಗಿ ಅವರ ಕಾರ್ಮಿಕತೆಯಿಂದ ಈಜಿಫ್ಟ್ ದೇಶದ ಗೀಸಾ ಪ್ರದೇಶದಲ್ಲಿ ಫರೋವಾ ರಾಜರುಗಳು ಈ ಪಿರಮಿಡ್ ಗಳನ್ನು ನಿರ್ಮಿಸಿದರು. *4500* ವರ್ಷಗಳ ಮುಂಚೆ ಈ ಪಿರಮಿಡ್ ಗಳ ನಿರ್ಮಾಣವಾಯಿತು.      *ಇದು ವಿಶ್ವ ಕಂಡ ಏಳು ಅದ್ಭುತಗಳಲ್ಲಿ ಒಂದಾಗಿದೆ*.       *Bc 5000 ರಿಂದ Bc 332 ರ ವರೆಗೆ* ಈಜಿಫ್ಟ್ ದೇಶವನ್ನು ಆಳಿದವರು ಈ ಫರೋವಾಗಳು. ತಮ್ಮ ಮರಣಾನಂತರ ಅವರ ಶರೀರಗಳು ಕೊಳೆಯಬಾರದೆಂದು ಮಮ್ಮಿಗಳಾಗಿ (ಪೆಟ್ಟಿಗೆಯಲ್ಲಿ ಹಾಕಿ) ಇರಿಸಲು ಈ ಪಿರಮಿಡ್ ಗಳನ್ನು ನಿರ್ಮಿಸಲಾಗಿದೆ. ಈ ಪಿರಮಿಡ್ ಗಳ ಪೈಕಿ ದೊಡ್ಡದಾದ ಪಿರಮಿಡ್ *ಕುಫು* ರಾಜನದ್ದಾಗಿತ್ತು. ಸರಾಸರಿ *2500 ಕಿಲೋ ಭಾರವಿರುವ 23 ಲಕ್ಷ ಕಲ್ಲುಗಳಿಂದ ಈ ಪಿರಮಿಡಿನ ಕಟ್ಟಲಾಗಿದೆ. ಇದರ ಎತ್ತರ 147 ಮೀಟರ್. ಸುಮಾರು ಮೂರು ಲಕ್ಷ ಜನರು ವರ್ಷಗಳಿಂದ ಕೆಲಸ ನಿರ್ವಹಿಸಿ ಇದನ್ನು ನಿರ್ಮಿಸಲಾಗಿದೆ*.                           ಕ್ರೇನ್'ಗಳು ಅಥವಾ ಯಂತ್ರೋಪಕರಣ ಇಲ್ಲದೆ 4500 ವರ್ಷಗಳ ಮುಂಚೆ ಈ ಕಲ್ಲುಗಳನ್ನು ಮೇಲೆತ್ತಿ ನಿರ್ಮಿಸಲು ಕಾರ್ಮಿಕರು ಅದೆಷ್ಟು ಪಾಡು ಪಟ್ಟಿರಬಹುದೆಂದು ಊಹಿಸಲಸಾಧ್ಯ.       ...

ಭಾಗ 7

#ಚರಿತ್ರೆಯ #ಅರೇಬಿಯಾ....   #ಭಾಗ - 7  n.u.t* #ಮೂಸಾ #ನೆಬಿ* ಅ.ಸ ನಿನ್ನೆಯ ಸಂಚಿಕೆಯಿಂದ...                  ಹಾಗೆ ಮೂಸಾ ನೆಬಿಯು ಶುಐಬರ ಬಳಿಗೆ ಬಂದರು. ನಂತರ ನಡೆದ ವಿಷಯವನ್ನೆಲ್ಲಾ ತಿಳಿಸಿದರು. ಆಗ ಶುಐಬ್ ನೆಬಿ ಹೇಳಿದರು ನೀವೇನೂ ಹೆದರಬೇಡಿ. ನೀವೀಗ ಅಕ್ರಮಿತ ಜನಾಂಗದವರಿಂದ ಸುರಕ್ಷಿತರಾಗಿರುವಿರಿ.                         ನಂತರ ಶೊಐಬರ ಮಗಳಲ್ಲಿ ಒಬ್ಬಾಕೆ ಹೇಳಿದಳು ಅಪ್ಪಾ ಈತನನ್ನು ಸೇವಕನಾಗಿ ನೇಮಿಸಿಕೊಳ್ಳಿರಿ. ನೀವು ಸೇವಕನಾಗಿ ನೇಮಿಸುವುದಕ್ಕೆ ಶಕ್ತಿವಂತ ಹಾಗೂ ನಂಬಲರ್ಹ ವ್ಯಕ್ತಿಯು ಯೋಗ್ಯರಲ್ಲವೇ ಎಂದಳು.       ಹಾಗೆಯೇ ಶುಐಬ್ ಹೇಳಿದರು ನೀವು ಎಂಟು ವರ್ಷ ನನ್ನ ಬಳಿ ಸೇವೆ ಸಲ್ಲಿಸುವುದಾದರೆ ನಾನು ಈ ನನ್ನ ಇಬ್ಬರು ಪುತ್ರಿಯರ ಪೈಕಿ ಒಬ್ಬಳನ್ನು ನಿಮಗೆ ವಿವಾಹ ಮಾಡಿಕೊಡುವೆನು. ನೀವು ಹತ್ತು ವರ್ಷ ಪೂರ್ತಿಗೊಳಿಸಿದರೆ ಅದು ನಿಮ್ಮ ಇಷ್ಟಕ್ಕನುಸಾರವಾಗಿದೆ. ನಾನು ನಿಮ್ಮನ್ನು ಯಾವುದೇ ಇಕ್ಕಟ್ಟಿಗೆ ಸಿಲುಕಿಸುವುದಿಲ್ಲ. ಅಲ್ಲಾಹನು ಇಚ್ಛಿಸಿದರೆ ನೀವು ನನ್ನನ್ನು ಸಜ್ಜನನಾಗಿ ಕಾಣುವಿರಿ ಎಂದರು.      ಅದಕ್ಕುತ್ತರವಾಗಿ ಮೂಸಾ ನೆಬಿ ಹೇಳಿದರು ಇದು ನನ್ನ ಹಾಗೂ ನಿಮ್ಮ ನಡುವಣ ಒಪ್ಪಂದವಾಗಿದೆ, ನಾನು ಈ ಎರಡು ಅವಧಿಗಳ ಪೈಕಿ ಯಾ...

ಭಾಗ 6

#ಚರಿತ್ರೆಯ #ಅರೇಬಿಯಾ.  #ಭಾಗ - 6    n.u.t* #ಮೂಸಾ #ನೆಬಿ (ಅ.ಸ)     ಮೂಸಾ ನೆಬಿಯು 3500 ವರ್ಷಗಳ ಮುಂಚೆ ಈಜಿಪ್ಟ್ ನಲ್ಲಿ ಜನಿಸಿದರು. ಫಿರ್-ಹೌನ್ ಎಂಬ ಧಿಕ್ಕಾರಿಯುತ ರಾಜನು ಇಸ್ರಾಈಲ್ ಸಮುದಾಯದಲ್ಲಿರುವ ಎಲ್ಲಾ ಗಂಡು ಮಕ್ಕಳನ್ನು ಕೊಲ್ಲಬೇಕೆಂದು ಆಜ್ಞೆಮಾಡಿದಾಗಾಗಿತ್ತು ಮೂಸಾ ನೆಬಿಯ ಜನನ. ಆಗ ಗಂಡು ಮಕ್ಕಳನ್ನು ಮರದ ಪೆಟ್ಟಿಗೆಯಲ್ಲಿ ಹಾಕಿ ನೈಲ್ ನದಿಯಲ್ಲಿ ಬಿಡಲು ಅಲ್ಲಾಹನು ಆಜ್ಞೆ ಮಾಡಿದನು.  ಅಲ್ಲಾಹನ ಆಜ್ಞೆಯಂತೆ ಮೂಸಾ ನೆಬಿಯನ್ನೂ ಅವರ ತಾಯಿ ಒಂದು ಮರದ ಪೆಟ್ಟಿಗೆಯಲ್ಲಿ ಹಾಕಿ ನೈಲ್ ನದಿಯಲ್ಲಿ ಹರಿಯಲು ಬಿಟ್ಟರು. ನದಿ ತಟದಲ್ಲಿದ್ದ ಫಿರ್-ಹೌನಿನ ಮಡದಿಯಾದ ಹಾಸಿಯಾ ಎಂಬ ಮಹದಿಯು ಪೆಟ್ಟಿಗೆಯನ್ನು ಕಂಡರು. ಆ ಪೆಟ್ಟಿಗೆಯನ್ನು ಫಿರ್ - ಹೌನ್'ನ ಅರಮನೆಗೆ ತಂದರು.  ಇಸ್ರಾಯಿಲ್ ವಂಶಸ್ಥ ಗಂಡು ಮಗುವಾಗಿದ್ದರಿಂದ ಫಿರ್-ಹೌನ್ ಆ ಮಗುವನ್ನು ಕೊಲ್ಲಲು ಮುಂದಾದರು.           ಆದರೆ ಫಿರ್-ಹೌನಿನ ಮಡದಿಯು ಇದನ್ನು ತಡೆಹಿಡಿದರು.     ಫಿರ್-ಹೌನನು ತನ್ನ ಮಡದಿಯ ನಿರ್ಭಂದಕ್ಕೆ ಮಣಿದು ಕೈಗೊಂಡಿದ್ದ ತೀರ್ಮಾನವನ್ನು ಉಪೇಕ್ಷಿಸಿದರು.  ಮಗುವಿಗೆ ಹಾಲುಣಿಸಲು ಸಾಕುತಾಯಿಯ ಕೈಗಿತ್ತರು. ಆದರೆ ಸಾಕುತಾಯಿಯು ಮೂಸಾ ನೆಬಿ ನಿಜವಾದ ತಾಯಿಯಾಗಿದ್ದರು.  ಈ ವಿಷಯ ಫಿರ್-ಹೌನಿಗೆ ಅರಿತಿರಲಿಲ್ಲ.  ಮಗುವಾಗಿದ್ದ ಮೂಸಾ ನೆಬಿ ಕೋಟೆ ಕೊತ್ತ...

ಭಾಗ 5

#ಚರಿತ್ರೆಯ.. #ಅರೇಬಿಯಾ....  #ಭಾಗ - 5   n.u.t* #ನಹ್ರ್ #ಯೂಸುಫ್ ಯಹ್-ಕೂಬ್ ನೆಬಿಯವರ ಮಗನಾಗಿದ್ದರು ಯೂಸುಫ್ ನೆಬಿ.  ಯೂಸುಫ್ ನೆಬಿ ಈಜಿಪ್ಟ್ ದೇಶವನ್ನು ಆಳುತ್ತಿದ್ದರು. ಆ ಕಾಲದಲ್ಲಿ ಸಾವಿರ ದಿನಗಳಿಂದ ನಿರ್ಮಿತವಾದ ನೈಲ್ ನದಿಯ ಉಪನದಿಯಾಗಿದೆ  *ನಹ್ರ್ ಯೂಸುಫ್*.              ಸಾವಿರ ದಿನಗಳನ್ನು  ಅರಬೀ ಬಾಷೆಯಲ್ಲಿ *ಅಲ್ಫ್ ಯೌಮ್* ಎಂದು ಕರೆಯುತ್ತಾರೆ. ಸಾವಿರ ದಿನಗಳಿಂದ ಈ ನದಿ ನಿರ್ಮಾನವಾದ್ದರಿಂದ ಆ ಪ್ರದೇಶಕ್ಕೆ ಅಲ್ಫ್ ಯೌಮ್ ಎಂದು ಹೆಸರಿದ್ದು ಆ ಪ್ರದೇಶದಲ್ಲಿ ಈ ನದಿ ಈಗಲೂ ಹರಿಯುತ್ತಿದೆ.  ಈ ನದಿಯ ಕಾರಣದಿಂದಲೇ ಆ ಪ್ರದೇಶವು ಈಗಲೂ ಹಸಿರು ಭರಿತವಾದ ಸುಂದರ ಪ್ರದೇಶವಾಗಿ  ಕಂಗೊಳಿಸುತ್ತಿದೆ.  ಈಜಿಪ್ಟ್ ದೇಶದ ಕೈರೂ ಪಟ್ಟಣದಿಂದ ಎಂಭತ್ತು ಕಿ.ಮೀ ದೂರದಲ್ಲಿದೆ ಈ ಪ್ರದೇಶ. *ಶುಐಬ್ (ಅ.ಸ)   ಮದಿಯನ್ ಜನರು*       ಜೋರ್ಡನ್ ದೇಶದ ರಾಜಧಾನಿಯಾದ ಅಮ್ಮಾನ್ ನಿಂದ ನೂರ ಮುವತ್ತೈದು ಕಿ.ಮೀ ದೂರದ ಪ್ರದೇಶವಾಗಿದೆ ಮದಿಯನ್.   ಮದಿಯನ್ ಜನೆತೆಯು ಅನಾಚಾರ ಹಾಗು ತೂಕದಲ್ಲಿ ಏರುಪೇರು ಮಾಡಿ ಜನರನ್ನು ವಂಚಿಸುತ್ತಿದ್ದರು.  ಆ ಕಾಲದಿ ಅಲ್ಲಾಹನು ನೇಮಿಸಿ ಕಳುಹಿಸಿಕೊಟ್ಟ ಪ್ರವಾಜಗರಾಗಿದ್ದಾರೆ ಶುಐಬ್ ನೆಬಿ.               ಆ ಪ್ರದೇಶದಲ್ಲಿ ...

ಭಾಗ 4

#ಚರಿತ್ರೆಯ.. #ಅರೇಬಿಯಾ....  #ಭಾಗ - 4     n.u.t (ನಿನ್ನೆಯ ಸಂಚಿಕೆಯ ಮುಂದಿನ ಭಾಗ) #ಇಬ್ರಾಹಿಂ #ನೆಬಿ (ಅ.ಸ)            ಇಸ್ಮಾಯಿಲ್ ನೆಬಿಯವರು ಬೆಳೆದು ನಡೆಯಲು ಕಲಿಯುತ್ತಿರುವಾಗ ಸ್ವಂತ ಕೈಗಳಿಂದಲೇ ತನ್ನ ಮಗನನ್ನು ಕತ್ತು ಕೊಯ್ದು ಕೊಲ್ಲಬೇಕಾಗಿ  ಇಸ್ಮಾಯಿಲ್ ನಬಿಯವರ ತಂದೆ ಇಬ್ರಾಹಿಂ(ಅ.ಸ)ರಿಗೆ ಅಲ್ಲಾಹನು ಆಜ್ಞೆ ಹೊರಡಿಸಿದನು.  ದೇವನ ಆಜ್ಞೆಯನ್ನು ಪಾಲಿಸಲು ಇಬ್ರಾಹಿಂ ನೆಬಿ ಮತ್ತೆ ಫೆಲೆಸ್ತೀನಿನಿಂದ ಮಕ್ಕಾಗೆ ಯಾತ್ರೆ ಬಂದರು. ತನ್ನ ಮಗ ಇಸ್ಮಾಯಿಲ್'ನನ್ನು ಕರೆದುಕೊಂಡು ಮಿನಾ ಎಂಬ ಪ್ರದೇಶಕ್ಕೆ ತೆರಳುವಾಗ ಅಲ್ಲಾಹ ಆ ಕರೆಯನ್ನು ತಿರಸ್ಕರಿಸಿ ಹಿನ್ನಡೆಯುವಂತೆ ಶೈತಾನನು ಅವರನ್ನು ತಡೆಯಲೆತ್ನಿಸಿದನು.  ಶೈತಾನನ ಆ ಅಶೀರವಾಣಿ ಕೇಳಿದ ಸ್ಥಳಕ್ಕೆ ಇಬ್ರಾಹಿಂ ನೆಬಿ ಕಲ್ಲು ಬಿಸಾಡಿ ಶೈತಾನನ್ನು ಓಡಿಸಿದರು.             ಪೈಗಂಬರ್ ಮಹಮ್ಮದ್ ನೆಬಿ (ಸ.ಅ) ರವರ ಕಲ್ಪನೆಯ ಪ್ರಕಾರ ಈ ಪ್ರದೇಶದಲ್ಲಿ ಹಜ್ ಸಮಯದಲ್ಲಿ ಶೈತಾನನಿಗೆ ಕಲ್ಲು ಎಸೆಯುವಾಗ ನಮ್ಮಲ್ಲಿ ಭಯ ಭಕ್ತಿ ಇಲ್ಲದೇ ಮುನ್ನಡೆದರೆ ಆ ಹಜ್ಜ್ ಕೇವಲ ಒಂದು ಕಾರ್ಯ ಮಾತ್ರವಾಗುತ್ತದೆ. ಕಲ್ಲುಗಳು ಆ ಸ್ಥಳದಲ್ಲಿ ಬಿದ್ದರೆ ಸಾಕು.  ಅಲ್ಲಿ ನಿರ್ಮಿಸಿರುವ ಸೈತಾನನ ಕಂಬ ಎಂಬ ಆ ಕಂಬಕ್ಕೆ ತಾಗಬೇಕಿಂದಿಲ್ಲ.ಇದಕ್ಕಾಗಿ ಸೌದಿ ಸರಕಾರ ವಿಶೇಷ ರೀತಿಯ ಸೌಲಭ್ಯ...

ಭಾಗ 3

*ಚರಿತ್ರೆಯ ಅರೇಬಿಯಾ...  ಭಾಗ - 3        n.u.t* *ಇಬ್ರಾಹಿಂ (ಅ.ಸ)* ದಕ್ಷಿಣ ಇರಾಕಿನ ಬಗ್ದಾದಿನಿಂದ *400 ಕಿ.ಮೀ* ಕ್ರಮಿಸಿದಾಗ ಸಿಗುವ ಪಟ್ಟಣ "ಅನ್ ನಾಸಿರಿಯಾ". ಈ ಪಟ್ಟಣವು ಯುಪ್ರಟೀಸ್ ನದಿ ತೀರದಲ್ಲಿದೆ.ಅಲ್ಲಿಂದ ಹದಿನೈದು ಕಿ.ಮೀ ದೂರ ಕ್ರಮಿಸಿದಾಗ ಸಿಗುವ ಪ್ರದೇಶವಾಗಿದೆ ಬಾಬಿಲೋನಿಯಾದ "ಊರ್" ಎಂಬ ಸ್ಥಳ. ಇಲ್ಲಿ ಸುಮಾರು *4000* ವರ್ಷಗಳ ಹಿಂದೆ ಖಲೀಲುಲ್ಲಾಹಿ ಇಬ್ರಾಹಿಂ ನೆಬಿಯ ಜನನವಾಯಿತು.            *ಅಲ್ಲಾಹುವಿನ ಗೆಳೆಯ* ಎಂದು ವಿಶೇಷಿತನರಾದ ಪ್ರವಾದಿ "ಇಬ್ರಾಹಿಂ ನೆಬಿ ಅ.ಸ".ಇಬ್ರಾಹಿಂ ನೆಬಿಯ ಕುರಿತು ಕರಾನಿನ ಹಲವು ಕಡೆಗಳಲ್ಲಿ ವಿವರಿಸಲ್ಪಟ್ಟಿದೆ. ಕುರಾನಿನ *69* ಸ್ಥಳಗಳಲ್ಲಿ ಇಬ್ರಾಹಿಂ ನೆಬಿಯ ಹೆಸರು ಪ್ರಕಟಿತವಾಗಿದೆ.                  ಊರ್ ಪ್ರದೇಶದ ಕಾವಲುಗಾರನೆಂದು ಜನರು ವಿಶ್ವಾಸವಿಟ್ಟ ನಂಬ್ರೂದ್ ಸೂರ್ಯದೇವನನ್ನು ಆರಾದಿಸಲು ನಿರ್ಮಿಸಿದ ದೇವಸ್ಥಾನವು ಈಗಲೂ ಊರ್ ಪ್ರದೇಶದಲ್ಲಿ ನೆಲೆನಿಂತಿದೆ.  ಸುಮಾರು ಐದು ಸಾವಿರದಷ್ಟು ಮೂರ್ತಿಗಳು ಹಾಗೂ ನಮ್ರುದ್ ರಾಜನಲ್ಲಿರುವ ವಿಶ್ವಾಸಗಳನ್ನು  ಕಡಿಮೆಗೊಳಿಸಲು ಇಬ್ರಾಹಿಂ ನೆಬಿಯವರು ಜನತೆಯನ್ನು ಮನವರಿಕೆ ಮಾಡುತ್ತಿದ್ದರು. ಮಾನವ ನಿರ್ಮಿತ ಮೂರ್ತಿಗಳನ್ನು ಪೂಜಿಸುವುದು ದೇವಧಿಕ್ಕಾರವಾಗಿದೆಯೆಂದು ಅವರು ಎಚ್ಚರಿಸುತಿ...

ಭಾಗ 2

#ಚರಿತ್ರೆಯ #ಅರೇಬಿಯಾ.....   #ಭಾಗ - 2 ....  n.u.t   #ಸ್ವಾಲಿಹ್ #ನೆಬಿ (ಅ.ಸ) ಮತ್ತು #ಸಮೂದ್ (ಗೋತ್ರ) #ಸಮುದಾಯ     ಸುಮಾರು  5000 ವರ್ಷಗಳ ಹಿಂದೆ ಜೀವಿಸಿದ ಜನ ಸಮುದಾಯವಾಗಿದೆ ಸಮೂದ್ ಜನಾಂಗ. ಸಮೂದ್ ಗೋತ್ರಕ್ಕೆ ಅಲ್ಲಾಹನು ನಿಯೋಜಿಸದ ನೆಬಿಯಾಗಿದೆ ಸ್ವಾಲೀಹ್ ನೆಬಿ       ಮದೀನದಿಂದ 405 ಕಿ.ಮೀ ಕ್ರಮಿಸಿದಾಗ ಸುಗುವ ಪ್ರದೇಶವಾಗಿದೆ ಮದನ್ - ಸಾಲ.     ತಬೂಕಿಗೆ ಹತ್ತಿರ ಪ್ರದೇಶವಾದ ಈ ಪ್ರದೇಶಗಳಿಗೆ ಕಳೆದ ಬಾರಿ ನಾನು ಭೇಟಿಕೊಟ್ಟಿದ್ದೆ.  ಸಮೂದ್ ಗೋತ್ರದ ಪಳೆಯುಳಿಕೆ ಮನೆಗಳು, ಮಂಟಪ, ಹಾಗೂ ಬಾವಿ ಇತ್ಯಾದಿ ಕಾಣಬಹುದು.  ಅಲ್ಲೂಲ ಮ್ಯೂಸಿಯಂಗೆ ತೆರಳಿದರೆ ಪಳೆಯುಳಿಕೆಗಳು ಕಾಣಬಹುದು. ಸೌದಿ ಆನಿವಾಸಿಗಳು ಭೇಟಿಕೊಟ್ಟರೆ ಚರಿತ್ರೆಗಳಿಂದ ಪಾಠ ಕಲಿಯಬಹುದು.  ಸ್ವಾಲಿಹ್ ನೆಬಿಯ ಮುಲಕ ಅಲ್ಲಾಹನು ಕಲ್ಪಿಸಿದರು ಅಧ್ಯಾಯ 11: ಹೂದ್, ಸೂಕ್ತ  61 ﻭَﺇِﻟَﻰٰ ﺛَﻤُﻮﺩَ ﺃَﺧَﺎﻫُﻢْ ﺻَٰﻠِﺤًﺎ ۚ ﻗَﺎﻝَ ﻳَٰﻘَﻮْﻡِ ٱﻋْﺒُﺪُﻭا۟ ٱﻟﻠَّﻪَ ﻣَﺎ ﻟَﻜُﻢ ﻣِّﻦْ ﺇِﻟَٰﻪٍ ﻏَﻴْﺮُﻩُۥ ۖ ﻫُﻮَ ﺃَﻧﺸَﺄَﻛُﻢ ﻣِّﻦَ ٱﻷَْﺭْﺽِ ﻭَٱﺳْﺘَﻌْﻤَﺮَﻛُﻢْ ﻓِﻴﻬَﺎ ﻓَﭑﺳْﺘَﻐْﻔِﺮُﻭﻩُ ﺛُﻢَّ ﺗُﻮﺑُﻮٓا۟ ﺇِﻟَﻴْﻪِ ۚ ﺇِﻥَّ ﺭَﺑِّﻰ ﻗَﺮِﻳﺐٌ ﻣُّﺠِﻴﺐٌ ಸಮೂದ್ ಜನಾಂಗದೆಡೆಗೆ, (ದೂತರಾಗಿ) ಅವರ ಸಹೋದರ ಸಾಲಿಹ್ ಬಂದರು. ಅವರು ಹೇಳಿದರ...
#ಅಸ್ಸಲಾಂ #ಅಲೈಕುಂ....  #ಚರಿತ್ರೆಯ #ಅರೇಬಿಯಾ ... #ಭಾಗ  - 1 ಆತ್ಮೀಯ ಗೆಳೆಯರೆ ನಾನು ನಿಮ್ಮ ಗೆಳೆಯ *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*..... ಇಸ್ಲಾಂ ಧರ್ಮ ಅದು ಶಾಂತಿಯ ಹಾಗು ಸತ್ಯದ ಧರ್ಮ.    ಇಸ್ಲಾಂ ಧರ್ಮದ ಕುರಿತು ಅರಿತವರು ಹಲವರು.  ಅರಿಯದವರು ಕೆಲವರು.  ವೀಶ್ವದ ನಾನಾಕಡೆ ಇಸ್ಲಾಂ ಧರ್ಮ ವಿಸ್ತರಿಸಿದ್ದು ವಿಶ್ವದ ಬಹುತೇಕ ದೇಶಗಳಲ್ಲಿ ಇಸ್ಲಾಂ ಧರ್ಮ ನೆಲೆನಿಂತಿದೆ.            ಇಸ್ಲಾಂ ಧರ್ಮವು ಸಾವಿರಾರು ವರ್ಷಗಳ ಹಿಂದಿಯೂ ಬಾರೀ ಪ್ರಚಲಿತವಾಗಿತ್ತು. ಅದಕ್ಕೆ ಸಾಕ್ಷಿ ಆಗಿದೆ ಹದೀಸ್, ಖರಾನ್, ಚರಿತ್ರೆಗಳು, ಕಟ್ಟಡಗಳು, ಅವಶೇಷಗಳು.    ಇಸ್ಲಾಂ ಚರಿತ್ರೆಯನ್ನು ಬರೆದು ಮುಗಿವಷ್ಟು ಕಮ್ಮಿಯೇನಿಲ್ಲ..   ಸರಿಯಾಗಿ ವಿಸ್ತರಿಸುತ್ತಾ ಹೋದರೆ ಪುಟಗಳು ಸಾಕಾಗಲಾರದು.                 ಆದರೂ ಇಸ್ಲಾಂ ಧರ್ಮದ ಕುರಿತು ನಾ ಕೇಳಿ ತಿಳಿದ ಹಾಗೂ ಅರಿತ ಕೆಲ ಚರಿತ್ರೆಗಳನ್ನು ಹಂತ ಹಂತವಾಗಿ, ಅಲ್ಪವಾಗಿ ನಿಮ್ಮ ಮುಂದಿಡಲು *ಚರಿತ್ರೆಯ ಅರೇಬಿಯಾ* ಎಂಬ ಹೆಸರಿನೊಂದಿಗೆ ತಿಳಿಸಲು ಬಯಸುತ್ತೇನೆ... ಇಂಶಾ ಅಲ್ಲಾ.... *ಭಾಗ - 1*   *ಜಬಲು - ರಹ್ಮ*            ಭೂಮಿಯಲ್ಲಿರುವ ಅದೆಷ್ಟೋ ಜೀವ ರಾಶಿಗಳಿಂದ ವಿಶಿಷ್ಟವಾಗಿ ಭುದ್ದಿಯುತ ...