ಭಾಗ 4

#ಚರಿತ್ರೆಯ.. #ಅರೇಬಿಯಾ....  #ಭಾಗ - 4     n.u.t

(ನಿನ್ನೆಯ ಸಂಚಿಕೆಯ ಮುಂದಿನ ಭಾಗ)

#ಇಬ್ರಾಹಿಂ #ನೆಬಿ (ಅ.ಸ)
     
     ಇಸ್ಮಾಯಿಲ್ ನೆಬಿಯವರು ಬೆಳೆದು ನಡೆಯಲು ಕಲಿಯುತ್ತಿರುವಾಗ ಸ್ವಂತ ಕೈಗಳಿಂದಲೇ ತನ್ನ ಮಗನನ್ನು ಕತ್ತು ಕೊಯ್ದು ಕೊಲ್ಲಬೇಕಾಗಿ  ಇಸ್ಮಾಯಿಲ್ ನಬಿಯವರ ತಂದೆ ಇಬ್ರಾಹಿಂ(ಅ.ಸ)ರಿಗೆ ಅಲ್ಲಾಹನು ಆಜ್ಞೆ ಹೊರಡಿಸಿದನು.  ದೇವನ ಆಜ್ಞೆಯನ್ನು ಪಾಲಿಸಲು ಇಬ್ರಾಹಿಂ ನೆಬಿ ಮತ್ತೆ ಫೆಲೆಸ್ತೀನಿನಿಂದ ಮಕ್ಕಾಗೆ ಯಾತ್ರೆ ಬಂದರು. ತನ್ನ ಮಗ ಇಸ್ಮಾಯಿಲ್'ನನ್ನು ಕರೆದುಕೊಂಡು ಮಿನಾ ಎಂಬ ಪ್ರದೇಶಕ್ಕೆ ತೆರಳುವಾಗ ಅಲ್ಲಾಹ ಆ ಕರೆಯನ್ನು ತಿರಸ್ಕರಿಸಿ ಹಿನ್ನಡೆಯುವಂತೆ ಶೈತಾನನು ಅವರನ್ನು ತಡೆಯಲೆತ್ನಿಸಿದನು.  ಶೈತಾನನ ಆ ಅಶೀರವಾಣಿ ಕೇಳಿದ ಸ್ಥಳಕ್ಕೆ ಇಬ್ರಾಹಿಂ ನೆಬಿ ಕಲ್ಲು ಬಿಸಾಡಿ ಶೈತಾನನ್ನು ಓಡಿಸಿದರು.

            ಪೈಗಂಬರ್ ಮಹಮ್ಮದ್ ನೆಬಿ (ಸ.ಅ) ರವರ ಕಲ್ಪನೆಯ ಪ್ರಕಾರ ಈ ಪ್ರದೇಶದಲ್ಲಿ ಹಜ್ ಸಮಯದಲ್ಲಿ ಶೈತಾನನಿಗೆ ಕಲ್ಲು ಎಸೆಯುವಾಗ ನಮ್ಮಲ್ಲಿ ಭಯ ಭಕ್ತಿ ಇಲ್ಲದೇ ಮುನ್ನಡೆದರೆ ಆ ಹಜ್ಜ್ ಕೇವಲ ಒಂದು ಕಾರ್ಯ ಮಾತ್ರವಾಗುತ್ತದೆ. ಕಲ್ಲುಗಳು ಆ ಸ್ಥಳದಲ್ಲಿ ಬಿದ್ದರೆ ಸಾಕು.  ಅಲ್ಲಿ ನಿರ್ಮಿಸಿರುವ ಸೈತಾನನ ಕಂಬ ಎಂಬ ಆ ಕಂಬಕ್ಕೆ ತಾಗಬೇಕಿಂದಿಲ್ಲ.ಇದಕ್ಕಾಗಿ ಸೌದಿ ಸರಕಾರ ವಿಶೇಷ ರೀತಿಯ ಸೌಲಭ್ಯಗಳನ್ನು ನಿರ್ಮಾಣ ಮಾಡಿದೆ. ಅಲ್ಲಾಹು ಅಕ್ಬರ್ ಎಂಬ ವಾಕ್ಯದೊಂದಿಗೆ ಕಲ್ಲನ್ನು ಎಸೆಯಬೇಕು. ನಮಗೆ ಅಲ್ಲಾಹನಲ್ಲದೇ ಬೇರೆ ದೇವನಿಲ್ಲ ಎಂಬ ಧೃಡ ವಿಸ್ವಾಸವಾಗಿದೆ ಇದರಿಂದ ಮೂಡುವುದು.

           ಅಲ್ಲಾಹನ ಆಜ್ಞೆಯಂತೆ ಮಗ ಇಸ್ಮಾಯಿಲ್ ನೆಬಿಯನ್ನು ಮಲಗಿಸಿ ಕತ್ತು ಕೊಯ್ಯಲು ಯತ್ನಿಸಿದಾಗ ಮತ್ತೆ ಅಲ್ಲಾಹನ ಆಜ್ಞಾಪಿಸಿದರು ಬೇಡ ಇಬ್ರಾಹಿಮೇ ನನ್ನ ಕಲ್ಪನೆಯನ್ನು ನೀನು ನೆರವೇರಿಸಿರುವೆ. ಅದಕ್ಕನುಗುಣವಾಗಿ ಒಂದು ಆಡನ್ನು ಬಲಿದಾನ ಮಾಡಿರಿ. ದೇವನ ಪ್ರೀತಿಗೆ ಪಾತ್ರರಾಗಲು ಎಲ್ಲವನ್ನು ತ್ಯಜಿಸಲು ಸಿದ್ದನಿದ್ದೇನೆ ಎನ್ನುವುದೇ ಬಲಿದಾನದ ಉದ್ದೇಶವಾಗಿತ್ತು.
      ಮಗ ಇಸ್ಮಾಯಿಲ್ ನೆಬಿ ಬೆಳೆದು ದೊಡ್ಡವನಾದಾಗ ಇಬ್ಬರೊಂದಿಗೆ ಕಅಬಾಲಯವನ್ನು ಪುನರ್ನಿಮಿಸಲು ಅಲ್ಲಾಹನು ಆಜ್ಞಾಪಿಸಿದರು.


*ಲೂತ್ ನೆಬಿ (ಅ.ಸ)  ಮತ್ತು ಡೆಡ್ ಸೀ....*

          ಸೌದಿ ಅರೇಬೀಯಾದ ಪಕ್ಕದ ದೇಶವಾಗಿದೆ ಜೋರ್ಡಾನ್.  ಇಬ್ರಾಹಿಂ ನೆಬಿಯ ಸಹೋದರ ಪುತ್ರನಾದ ಲೂತ್ ನೆಬಿಯನ್ನು ಪೆಲೆಸ್ತೀನಿನ ಪೂರ್ವ ಭಾಗಗಳಿಗೆ ಅಲ್ಲಾಹನು ನಿಯೋಜಿಸಿದರು. ಅದರಲ್ಲಿ ಹೆಚ್ಚು ಪ್ರಾಶಸ್ತ್ಯ ಇರುವ ಪ್ರದೇಶ ಸದೋಮ್ ಆಗಿತ್ತು. *4000* ವರ್ಷಗಳ ಮುಂಚೆ ತನ್ನ ಜನತೆಯು ಸಲಿಂಗ ಕಾಮವೆಂಬ ನೀಚ ಕೃತ್ಯದಲ್ಲಿ ಮುಳುಗಿಹೋಗಿತ್ತು.  ಇದರಿಂದ ಮುಕ್ತಿ ಹೊಂದಲು ತನ್ನ ಜನತೆಯೊಂದಿಗೆ ಲೂತ್ ನೆಬಿ ಆದೇಶಿಸಿದರು.  ಆದರೆ ಅವರ ಮಾತನ್ನು ಕಿವಿಗೊಡದ ಜನತೆಯು ಸಾರ್ವಜನಿಕವಾಗಿ ಸ್ವವರ್ಗ ಸಂಭೋಗದೊಂದಿಗೆ ಲೂಟಿಕಾರರಾಗಿ ಪರಿವರ್ತನೆಯಾದರು.  ಲೂತ್ ನೆಬಿಯ ಮಾತಿಗೆ ಬೆಲೆಕೊಟ್ಟು ತನ್ನ ಮನೆಯರು ಮಾತ್ರ ಸತ್ಯ ವಿಶ್ವಾಸಿಗಳಾದರು. ಆ ನಾಡಿನ ಉದ್ದಾರಕ್ಕಾಗಿ ಮನುಷ್ಯ ರೂಪದಲ್ಲಿ ಬಂದ ಮಲಕುಗಳನ್ನೂ ಅವರು ಸಂಭೋಗ ಮಾಡಲು ಓಡಿ ಬಂದರು. ಮಲಕುಗಳೊಂದಿಗೆ ಲೂತ್ ನೆಬಿ ಹಾಗು ಮನೆಯವರೊಂದಿಗೆ ಊರು ಬಿಡಲು ಅಲ್ಲಾಹು ಕಲ್ಪಿಸಿದರು. ಮತ್ತೆ ಉಂಟಾದ ಸಂಭವ ಕುರಾನ್ ವ್ಯಕ್ತಪಡಿಸುತ್ತಿದೆ.

*ಅಧ್ಯಾಯ 11:* ಹೂದ್, ಸೂಕ್ತ  82

*ﻓَﻠَﻤَّﺎ ﺟَﺎٓءَ ﺃَﻣْﺮُﻧَﺎ ﺟَﻌَﻠْﻨَﺎ ﻋَٰﻠِﻴَﻬَﺎ ﺳَﺎﻓِﻠَﻬَ ﻭَﺃَﻣْﻄَﺮْﻧَﺎ ﻋَﻠَﻴْﻬَﺎ ﺣِﺠَﺎﺭَﺓً ﻣِّﻦ ﺳِﺠِّﻴﻞٍ ﻣَّﻨﻀُﻮﺩٍ*
ಕೊನೆಗೆ ನಮ್ಮ ಆದೇಶವು ಬಂದು ಬಿಟ್ಟಾಗ ನಾವು ಅದನ್ನು (ಆ ನಾಡನ್ನು) ಬುಡಮೇಲುಗೊಳಿಸಿ ಬಿಟ್ಟೆವು ಮತ್ತು ಅದರ ಮೇಲೆ ಬೆಂದ ಕಲ್ಲಿನ ಹರಳುಗಳ ಮಳೆಯನ್ನು ನಿರಂತರ ಸುರಿಸಿದೆವು.    
                                                                                     *ಡೆಡ್ ಸೀ.. ಸತ್ತ ಸಮುದ್ರ*

ಜೋರ್ಡಾನ್ ದೇಶದ ರಾಜಧಾನಿ ಅಮ್ಮಾನ್ ನಿಂದ *ಎಂಭತ್ತೈದು ಕಿ.ಮೀ* ಕ್ರಮಿಸಿದಾಗ ಸಿಗುವ ಪ್ರದೇಶವೇ ಡೆಡ್ ಸೀ..  ಈ ಸಮುದ್ರಕ್ಕೆ ಕಳೆದ ವರ್ಷ ನನ್ನ ಖಫೀಲ್ ನೊಂದಿಗೆ ಯಾತ್ರೆ ಮಾಡಿ ಅಲ್ಲಿಗೆ ಭೇಟಿ ಕೊಟ್ಟು ತಂಗಿದ ನೆನಪಿನ್ನೂ ಮಾಸಿಲ್ಲ.

ಅಲ್ಲಾಹನ ಶಿಕ್ಷೆಯಿಂದ ಉಂಟಾದ ರಸದಿಂದ ಸೃಷ್ಟಿಯಾದ ಜಲವಾಗಿದೆ ಡೆಡ್ ಸೀ. ಇದು ಸುಮಾರು *ಎಂಭತ್ತೈದು ಕಿ.ಮೀ ಉದ್ದ ಹಾಗೂ ಹದಿನೈದು ಕಿ.ಮೀ ಅಗಲವಿದೆ 1500 ಮೀಟರ್ ಆಳವೂ ಇದೆ*.  ಇದು ಮುಳುಗದ ಸಮುದ್ರವಾಗಿದೆ.  ಈ ಸಮುದ್ರದಲ್ಲಿ ಎಷ್ಟೇ ಈಜಾಡಿದರೂ ನಾವು ಮುಳುಗದಿಲ್ಲ.  ಅದಕ್ಕಾಗಿ ಈ ಸಮುದ್ರಕ್ಕೆ ಸತ್ತ ಕಡಲು, ಡೆಡ್ ಸೀ ಎಂ ಹೆಸರು ಸೃಷ್ಟಿಯಾಯಿತು.  ಇದರ ಒಂದು ಬದಿಯಲ್ಲಿ ಜೋರ್ಡಾನ್ ಇನ್ನೊಂದು ಬದಿಯಲ್ಲಿ ಇಸ್ರೇಲ್ ದೇಶವಿದೆ. ಸ್ವಯಂ ವರ್ಗಭೋಗಿಗಳಿಗೆ ಪಾಠವಾಗಲು ಈ ಸಮುದ್ರವು ನೆಲೆನಿಂತಿದೆ. ಇದು ಅಲ್ಲಾಹನ ಆಜ್ಞೆಯಾಗಿದೆ.

*(ಮುಂದುವರಿಯುವುದು..)*

- *ನಿಝಾಮುದ್ದೀನ್* ಉಪ್ಪಿನಂಗಡಿ ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ