ಭಾಗ 7

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ*
                 ಅವರೇ..#ಸುರಾಖರ_ಮಗಳು #ಭಾಗ - 7*

      ಸುಮಾರು ಮೂವತ್ತು ಸಾವಿರ ಸೈನ್ಯವನ್ನು ಮುನ್ನಡೆಸುತ್ತಾ ಸಹದ್ ರ.ಅ ರವರು ಯಾತ್ರೆ ಹೊರಟುರು . ಯಾತ್ರೆಯ ದಾರಿ ಮಧ್ಯೆ ಒಂದು ನದಿ ಅಡ್ಡವಾಗಿ ಹರಿಯುತ್ತೀತ್ತು.

          ನೀರು ಬಹಳಾ ರಭಸದಿಂದ ಹರಿಯುತ್ತಿತ್ತು. ಸಹದ್ ರ.ಅ ನೇತೃತ್ವದ ಸೈನ್ಯದ ಬಳಿ, ನದಿ ದಾಟುವ ಯಾವುದೇ ಸಲಕರಣೆ ಇರಲಿಲ್ಲ. ನದಿಗೆ ಯಾವುದೇ ಸೇತುವೆಯೂ ಇರಲಿಲ್ಲ, ಜೊತೆಗೆ ನದಿಯ ಬದಿಯಲ್ಲಿ ಯಾವುದೇ ದೋಣಿಯೂ ಕಾಣುತ್ತಿರಲಿಲ್ಲ.

   ಹತಾಶರಾದ ಸ್ವಹಾಬಿವರ್ಯರನ್ನೊಳಗೊಂಡ ಸೈನ್ಯವು ನಾಯಕರ ಕಡೆ ಮುಖಮಾಡಿದರು.
ನಾಯಕರಾದ ಸಹದ್ ರ.ಅ ರವರು ಸೈನ್ಯದೊಂದಿಗೆ ಕೇಳಿದರು.

    ಈ ಧರ್ಮ ಯಾರದ್ದಾಗಿದೆ...?
ಸ್ವಹಾಬಿವರ್ಯರು : ಅಲ್ಲಾಹನದ್ದಾಗಿದೆ.

   ಈ ನದಿ ಯಾರದ್ದಾಗಿದೆ....?
ಸ್ವಹಾಬಿವರ್ಯರು : ಅಲ್ಲಾಹನದ್ದಾಗಿದೆ.

    ಹಾಗಾದಲ್ಲಿ ಅಲ್ಲಾಹನ ಧರ್ಮ ಪ್ರಚಾರಕರಾದ ನಮ್ಮನ್ನು ತಡೆಯಲು, ಅಲ್ಲಾಹನ ಸೃಷ್ಟಿಯಾದ ಈ ನದಿಗೆ ಸಾಧ್ಯವಿಲ್ಲ.
   ನೀವು ನನ್ನನ್ನು ಹಿಂಬಾಲಿಸಿರಿ... ಎಂದು   ಮುಂದೆ ಸಾಗಿದರು. ಸೈನಿಕರೆಲ್ಲ ಸಹದ್ ರ.ಅ ರವರನ್ನು ಹಿಂಬಾಲಿಸಿದರೂ..
     
     " *ಅದು ಅಲ್ಲಾಹನ ಕರಾಮತ್ ಆಗಿತ್ತು*"

    *ಯಾವದೇ ಸಲಕರಣೆ ಇಲ್ಲದೆ ನದಿ ದಾಟಿದ ಎಲ್ಲರ ಕಾಲಿನ ಅಡಿ ಭಾಗ ಮಾತ್ರ ಒದ್ದೆಯಾಗಿತ್ತು.. (ಸುಬ್ಹಾನಲ್ಲಾ...)*

          *******

   ಸಹದ್ ರ.ಅ ಸೈನ್ಯದೊಂದಿಗೆ ಮನ್ನಡೆದರು.

       ಇರಾನಿನ ಗಡಿ ಭಾಗ ಶೈಬಾನ್ ಬೆಟ್ಟ ತಲುಪಿತು. ಖಲೀಪರ ನಿರ್ದೇಶನದಂತೆ ಬೆಟ್ಟದ ತಪ್ಪಲಿನಲ್ಲಿ ವಾಸಿಸುತ್ತಿರುವ ಹಸನ್ ಮುಸನ್ನಾ ರ.ಅ ರನ್ನು ಭೇಟಿಯಾಗಲು ಸಹದ್ ರ.ಅ ಸೈನ್ಯವನ್ನು ಒಂದೆಡೆ ನಿಲ್ಲಿಸಿ, ಒಬ್ಬರೇ ಹೊರಟರು.
   ಹಸನ್ ಮುಸನ್ನಾ ರ.ಅ ಭೇಟಿಯಾದ ಸಹದ್ ರ.ಅ ಸಲಾಂ ನೊಂದಿಗೆ ಮಾತು ಆರಂಭಿಸಿದರು.

      ಸಹದ್ ರ.ಅ ಹೇಳಿದರು " *ನಾವು ಮದೀನಾ ದಿಂದ ಬರುತ್ತಿದ್ದೇವೆ. ಯಶ್ಚುದುರ್ಗ್'ರ ಸೈನ್ಯದೊಂದಿಗೆ ಹೊರಾಡಲು ಹೊರಟಿದ್ದೇವೆ.. ನಿಮ್ಮನ್ನು ನಮ್ಮ ಸೈನ್ಯದಲ್ಲಿ ಸೇರಿಸಲು ಖಲೀಫರು ಹೇಳಿದ್ದಾರೆ. ಆದರೆ ಅದಕ್ಕೆ ಮೊದಲು ಕಾಶಿಂ ಸುರಾಖರನ್ನು ಯಾರು ಯಾಕೆ ಕೊಂದಿದ್ದಾರೆ...? ಎಂಬುದನ್ನು ತಿಳಿಯಲು ಹೇಳಿದ್ದಾರೆ ಎಂದರು.*

       ಹಸನ್ ಮುಸನ್ನಾ ಹೇಳಿದರು: ಕಾಶಿಂ ಸುರಾಖರು ವಧಿಸಿದ್ದಲ್ಲಿ ನನಗೂ ಅತೀವ ಬೇಸರವಿದೆ , ಆದರೆ ಆ ವಧೆಯ ಹಿಂದೆ ಒಂದು ಕುತೂಹಲ ಕತೆಯೊಂದಿದೆ.

     ಸಹದ್ ರ.ಅ ಹಸನ್ ಮುಸನ್ನಾ ರ.ಅ ರವರ ಮಾತುಗಳನ್ನು ಕುತೂಹಲದಿಂದ ಆಲಿಸುತ್ತಾ, ಅದೇನು..!! ಎಂದು ಕೇಳಿದರು.

   ಹಸನ್ ಮುಸನ್ನಾ ಮಾತು ಆರಂಭಿಸುತ್ತಾ..!

      *ಯಶ್ಚುದುರ್ಗ್'ಗೆ ತಹ್ಮಿನಾ ಎಂಬ ಮಗಳಿದ್ದಾಳೆ, ಅವಳು ಖಡ್ಗದೊಂದಿಗಿನ ಹೋರಾಟದಲ್ಲಿ ವಿಶ್ವದಲ್ಲೇ ಬಹಳಾ ಪ್ರಸಿದ್ಧಿ ಹೊಂದಿದ್ದಾಳೆ. ಅವಳೊಂದಿಗೆ ಖಡ್ಗ ಹೋರಾಟದಲ್ಲಿ ಸೋಲಿಸುವಂತವರಾರೂ ಈ ಭೂಮಿ ಮೇಲೆ ಇಲ್ಲ ಎಂಬುವುದು ಅವಳ ವಿಚಾರ*

     ಅವಳು(ತಹ್ಮಿನಾ) ಒಂದು ಪ್ರಕಟಣೆ ನಡೆಸಿದ್ದಳು

   " *ಖಡ್ಗದೊಂದಿಗಿನ ಹೋರಾಟದಲ್ಲಿ ನನ್ನನ್ನು ಸೋಲಿಸುವ ಹುಡುಗನನ್ನು ಮಾತ್ರ ನಾನು ವಿವಾಹ ವಾಗುವುಂದೆಂದು"*

ಮುಂದೇನಾಯಿತು...

 ( *ಮುಂದುವರಿಯುವುದು...*)

- *ನಿಝಾಮುದ್ದೀನ್ ಉಪ್ಪಿನಂಗಡಿ   ತಬೂಕ್*

https://www.facebook.com/Nizamuddin-Uppinangady-Tabuk-Page-1058686387577670/

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ