ಸಮುದಾಯದಲ್ಲಿ ದಾರಿತಪ್ಪುತ್ತಿರುವ ಯುವತಿಯರು

ಸಮುದಾಯದಲ್ಲಿ ದಾರಿತಪ್ಪುತ್ತಿರುವ ಯುವತಿಯರು..

******

     ಒಂದು ಕಾಲವಿತ್ತು , ತನ್ನ ಮಗನಿಗೆ ವಿದ್ಯಾವಂತ ಹುಡುಗಿ ನೊಡಿ ಮದುವೆ ಮಾಡಿ ಕೊಡೊದು , ವಿದ್ಯಾವಂತ ಹುಡುಗಿಯಾದರೆ ಚಿನ್ನ , ಕಾರು ಕೊಟ್ಟು ಮದುವೆಯಾಗುವ ರೀತಿ ,  ಸಮಾಜದಲ್ಲಿ ಗೌರವ ತೊರಿ ಬಿಂಬಿಸುವ ಚಿತ್ರನ ಸಾಮಾನ್ಯವಾಗಿತ್ತು.
     ಏನೊ ಗೊತ್ತಿಲ್ಲ ಮೊನ್ನೆ ನನ್ನ ಗೆಳೆಯನ ತಂದೆ ಒಂದು ಮಾತು ಹೇಳಿದರು ನನಗೇನೊ ಬಹಳಾ ಬೇಸರವಾಯಿತು . ಅವರ ಮಾತು ಆರಂಬವಾಯಿತು, ಓ ಸಹೋದರ ನನ್ನ ದುಬಾಯಿಯಲ್ಲಿರುವ ನನ್ನ ಮಗನಿಗೆ ಒಂದು ಹುಡುಗಿ ಬೇಕಾಗಿದೆ , ನಿನಗೆ ಗೊತ್ತಿರುವ ಯಾವುದಾದರೂ ಒಂದು ಹುಡುಗಿ ಇದ್ದರೆ ಹೇಳೆಂದರು. ಅದಕ್ಕೆ ನಾ ಏನಿದೆ ನಿಮ್ಮ ಬೇಡಿಕೆ ಅಂದೆ , ಅದಕ್ಕೆ ಅವರು ಹುಡುಗಿಯ ಸ್ವಭಾವ ಚೆನ್ನಾಗಿರಬೇಕು , ಅವರ ಕೈಲಾಗಾಗುವಷ್ಟು ಚಿನ್ನ ಹಾಕಲಿ ನೊ ಪ್ರಾಬ್ಲಂ , ಆದರೆ ಹುಡುಗಿ ಹೆಚ್ಚು ಕಲಿತಿರಬಾರದು ಎಂದರು . ಒಮ್ಮೆ ನನ್ನ ಮನಸಲ್ಲೇನೊ ಬಾವನೆ ಬಂತು , ಆಮೇಲೆ ಅವರೇ ಉತ್ತರಿಸಿದರು.
        ಹುಡುಗಿ ಕಲಿತವಲಾದರೆ ಅವಳ ಕಾಲೇಜು ಕಲಿಯುವಾಗ ಇದ್ದ ಹತ್ತಾರು  ಪ್ರೆಂಡ್ಗಳು , ಅವರೊಂದಿಗೆ ಚಾಟಿಂಗು , ಅವರೊಂದಿಗೆ ಪೊನಿನಲ್ಲಿ ಶಂಬಾಷಣೆ , ಗಂಡ ದುಬಾಯಿಗೆ ಮರಳಿದಾಗ ಅವರೊಂದಿಗೆ ಸುತ್ತಾಡುವಿಕೆ ಇದನೆಲ್ಲ ವಿಚಾರಿಸಿದರೆ ನಮ್ಮೊಂದಿಗೆ ಜಗಳವಾಡಿ ಕೊನೆಗೊಂದುದಿನ ನಮ್ಮ ಸಂಸಾರಕ್ಕೆ ಕಳಂಕ ಎಂದರು .
      ಅವರು ಹೇಳಿದ ಮಾತಿನಲ್ಲಿ ನನಗೆ ಸ್ವಲ್ಪ ಸತ್ಯವಿದೆಯೆಂದು ತಿಳಿಯಿತು.
     ಹೌದು ಗೆಳೆಯರೇ ನಮ್ಮೂರ ಸಮುದಾಯದ ಹುಡುಗಿಯರ ಸ್ಥಿತಿ ವಿಕೋಪಕ್ಕೆ ಹೋಗುತ್ತಿದೆ. ತನ್ನ ಸಂಸ್ಕೃತಿಯ ಮೇಲೆ ಪಾಶ್ಚಾತ್ಯ ಸಂಸ್ಕೃತಿ ಬೆರೆಸಿ ಇಸ್ಲಾಂ ಧರ್ಮದ ನೈಜ ಸಂಸ್ಕೃತಿ ವಿನಾಶದ ಕಡೆ ವಾಲುತ್ತಿದೆ. 
       ಬಟ್ಟೆ ಕರೀದಿಗಾಗಿ ಪೆರ್ನಾಲ್ಗೆ ಲೆಕ್ಕಹಾಕುವ ಮಹಿಳೆಯರು , ಬಟ್ಟೆಯಂಗಡಿಲ್ಲಿ ಹೊಸ ಡಿಸೈನ್ ಬರಲು ಕಾದು , ಆ ಡಿಸೈನ್ ಬಂದಾಗ ಮೊದಲು ನಾನೇ ಕರೀದಿಸಬೇಕೆಂಬ ಹಂಬಲ , ತನ್ನ ಶರೀರ ಇತರರಿಗೆ ಕಣಬಾರದೆಂದು ಹಾಕುವ ಬುರ್ಖಾದಲ್ಲಿ ಬಣ್ಣ ಬಣ್ಣ ಸೇರಿಸಿ ಇತರರನ್ನು ಆಕರ್ಷಸಿಸುವಿಕೆ . ಬ್ಯೂಟಿಪಾರ್ಲರಿಗೆ ಹೊಗಿ  ಕಣ್ಣು , ಮುಖ , ಕೂದಲನ್ನು ವಿರೂಪಗೊಳಿಸುದು ಸರ್ವ ಸಾಮಾನ್ಯವಾಗಿದೆ.
        ಹೆಚ್ಚು ಹುಡುಗರು ಸೇರುವ ಸಮಾರಂಬಗಳಿಂದ ಹಿಂದೆ ಸರಿಯುತಿದ್ದ ಹುಡುಗಿಯರಂತೂ , ಹೆಚ್ಚು ಜನ ಸೇರುವ ಕಡೆ ಹೊಗುತ್ತಿರುದು ಬಹಳಾ ದೊಡ್ಡ ವಿಪರ್ಯಾಸವಿಗಿಬಿಟ್ಟಿದೆ.
       ತನ್ನ ಮಗಳು ಕಳಿತು ದೊಡ್ಡ ವಿದ್ಯಾವಂತರಾಗಬೇಕೆಂಬ ಹಂಬಲದಿಂದ ಖಾಲೇಜಿಗೆ ಕಳಿಸಿದರೆ ಅಣ್ಣಂದಿರು ದುಬಾಯಿಂದ ಕಳುಹಿಸಿದ ಹಣ ಮೊಬೈಲ್ ಬಳಸಿ ಗೆಳೆಯರನ್ನು ಒಟ್ಟುಗೂಡಿಸಿ ಪಾರ್ಕ್ , ಬೀಚ್ , ಮಾಲ್ ಅಂತಾ ಸುತ್ತಾಡಿ ಮಜಾ ಉಡಾಯಿಸುದು ಸಾಮಾನ್ಯವಾಗಿದೆ. 
     "ಯಾವ ಧರ್ಮದವನೊಂದಿಗೂ ಪ್ರೀತಿಸಿದರೆ ಹರಾಂ"
     ಆದರೆ ಪ್ರೀತಿಗೆ ಧರ್ಮವಿಲ್ಲವೆಂಬಂತೆ ಹೆತ್ತು ಸಾಕಿ ಸಲಕಿದ ಮನೆಯವರ ದಿಕ್ಕರಿಸಿ ಓಡಿ ಹೋಗುವ ಯುವತಿಯರ ಸಂಖ್ಯೆ ದಿನೇ ದೀನೇ ಹೆಚ್ಚಾಗುತ್ತಿದೆ.
        " ಏನು ಮಾಡಬೇಕೆಂದು ತಿಳಿಯದ ಪರಿಸ್ಥಿತಿ ಮುಸ್ಲಿಂ ಸಮುದಾಯದ ಮಂದಿದೆ "

     ** ಕಾಲೇಜು ಶಿಕ್ಷಣ ನೀಡಿದರೆ ದಾರಿ ತಪ್ಪುತ್ತಿರುವ ಯುವತಿಯರು 
      ** ಕಾಲೇಜಿಗೆ ಕಳುಹಿಸಿದಿದ್ದರೆ ಸಮುದಾಯದ ಯುವತಿಯರು ಹಿಂದುಳಿಯುವಿಕೆ ಭಯ
    ಒಂದೂ ತಿಳಿಯದಾಗಿದೆ......

                              ನಿಝಾಮುದ್ದೀನ್
                             ಉಪ್ಪಿನಂಗಡಿ , ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ