ವಾಸ್ತವವೇ ಸತ್ಯ , ನಿತ್ಯ....

ವಾಸ್ತವವೇ ಸತ್ಯ , ನಿತ್ಯ....

***

ಕೊಲ್ಲುವವನಿಗೆ ತಿಳಿಯದಾಗಿದೆ..
      ನಾನು ಯಾರನ್ನು ಕೊಲ್ಲುತ್ತಿರುವೆನೆಂದು,
ಸತ್ತು ಹೆಣವಾಗಿ ಬೀಳುವವನಿಗೆ ತಿಳಿದಿಲ್ಲ..
    ನನ್ನ ಯಾರು ಯಾಕೆ ಕೊಂದರೆಂದು..

ತಾನು ಕಷ್ಟಪಟ್ಟು ದುಡಿದಿಟ್ಟ ಆಸ್ತಿ ಅಂತಸ್ತು..
       ತನಗೆ ಶಾಪವೆಂಬಂತೆ ತೊರಿದೆ,
ಆ ದೇವರು ಕೊಟ್ಟ ಅಂದದ ದೇಹ ಮುಖ,
    ತನ್ನ ಸಾವಿನ ರಹಸ್ಯವೆಂದರಿತ ಸಹೊದರಿ.,

ತಾನು ದೇಶ ಉದ್ದಾರಕ್ಕೆಂದು ಪಣ ತೊಟ್ಟು..
      ಖಾಕಿ ಹಾಕಿ ಮೊಸ ಮಾಡಿದಾಗ..
ನ್ಯಾಯದೇವತೆಗೆ ಕಣ್ಣಿಲ್ಲ ಎಂಬ ಸತ್ಯ ಮರೆಮಾಚಿ,
     ಅಸತ್ಯದಕಡೆ ಮುಖಮಾಡಿ ನಿಂತಾಗ..,

ಸುಳ್ಳು , ಮೊಸ ಜನರಿಗೆ ಹಿಡಿಸಿದ ಗುಣವಲ್ಲವೆಂದು .,
   ಅರಿತೂ ಅದನ್ನೇ ಕಸುಬಾಗಿರಿಸಿದಾಗ...
ಹುಟ್ಟು ಸಾವು ಪ್ರತಿಯೊಬ್ಬರಿಗಿದೆ ಎನ್ನುದು,
         ಸುಳ್ಳಂದು ನಂಬಿಸಲು ಹೊರಟವ...

ಈ ಸುಂದರ ದೇಹ ಆರೋಗ್ಯ ಕೊಟ್ಟ ದೇವರಮರೆತು,
   ಆ ಕಲ್ಲುದೇವರ ಸೃಷ್ಟಿಸಿದ ದೇವರ ದೂರಿದವ..
ಜೀವನ ಶಾಶ್ವತವಲ್ಲ, ಜೀವನದಲಿ ಮಾಡಿದ್ದು ಶಾಶ್ವತ
   ಆ ಜೀವನ ಜೀವಿಸಲು ಕಲಿ ಬಾ ನೀ.....

             ನಿಝಾಮುದ್ದೀನ್
              ಉಪ್ಪಿನಂಗಡಿ , ತಬೂಕ್ .

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ